ನಿಂಗಪ್ಪ ಹಮ್ಮಿಗಿ

ಶಿರಹಟ್ಟಿ: ಪಟ್ಟಣದಲ್ಲಿ ಮಾಗಡಿ ಹಾಗೂ ಬೆಳ್ಳಟ್ಟಿ ರಸ್ತೆಗೆ ಅಳವಡಿಸಲಾದ ಹೈಮಾಸ್ಟ್ ದೀಪಗಳು ಸಾರ್ವಜನಿಕರಿಗೆ ಬೆಳಕಾಗದೆ ಅವರ ಸಂಚಾರಕ್ಕೆ ಸಂಚಕಾರ ತರುತ್ತಿರುವುದು ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಹೌದು ನಾಗರಿಕರಿಗೆ ಒದಗಿಸಬಹುದಾದ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಹೈಮಾಸ್ಟ್‌ ದೀಪಗಳ ನಿರ್ವಹಣೆ ಇಲ್ಲದೆ  ಕತ್ತಲಲ್ಲಿ ಓಡಾಡುವ ದುಸ್ಥಿತಿ ನಿರ್ಮಾಣವಾಗಿದೆ. ಕೇವಲ ಕಂಬಗಳು ಮಾತ್ರ ಇದ್ದು, ದೀಪಗಳು ಮಾತ್ರ ಸಮರ್ಪಕವಾಗಿ ಬೆಳಗಿಲ್ಲ. ದೀಪಾವಳಿಗೊಮ್ಮೆ ಬೆಳಗುವ ದೀಪಗಳಂತೆ ಹೈಮಾಸ್ಟ್ ದೀಪಗಳು ಬೆಳಗುತ್ತಿದ್ದು, ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಲಕ್ಷಾಂತರ ರೂ. ಖರ್ಚು ಮಾಡಿ ಸ್ಥಾಪಿಸಿದ ಹೈಮಾಸ್ಟ್ ದೀಪಗಳನ್ನು ಬೆಳಕು ಚಲ್ಲದೇ ನಿರುಪಯುಕ್ತವಾಗಿ ನಿಂತಿವೆ. ರಾತ್ರಿ ಸಮಯದಲ್ಲಿ ಸಂಚರಿಸುವ ಸೈಕಲ್ ಸವಾರರು, ಪಾದಾಚಾರಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ದುಸ್ಥಿತಿ ಎದುರಾಗಿದೆ. ಅಲ್ಲದೆ ಈಗಾಗಲೇ ಅದೆಷ್ಟೋ ಸಣ್ಣ ಅಪಘಾತಗಳು ಸಂಭವಿಸಿದರೂ ಅಧಿಕಾರಿಗಳು ಮಾತ್ರ ಸಾರ್ವಜನಿಕರ ಕ್ಯಾರೆ ಎನ್ನುತ್ತಿಲ್ಲ.

ಈಗಾಗಲೇ ಹೈಮಾಸ್ಟ್‌ ದೀಪಗಳನ್ನು ನಿರ್ವಹಣೆಗೆ ಅಂದಾಜುಪ್ರತಿ(estimate) ತಯಾರಿಸಲು ಇಂಜಿನಿಯರ್ ಅವರಿಗೆ ತಿಳಿಸಿದ್ದು, ಒಂದು ವಾರದಲ್ಲಿ ಸಮಸ್ಯೆ ನಿವಾರಿಸಲಾಗುತ್ತದೆ.

-ಮಲ್ಲೇಶ, ಪಪಂ ಮುಖ್ಯಾಧಿಕಾರಿ

ವಿದ್ಯುತ್‌ ದೀಪಗಳು ಬೆಳಗದ ಕಾರಣ ಅಕ್ರಮ ಅವ್ಯವಹಾರ, ಅನೈತಿಕ ಚಟುವಟಿಕೆಗಳಿಗೆ ಪಟ್ಟಣ ಪಂಚಾಯ್ತಿಯೇ ಅವಕಾಶ ಮಾಡಿಕೊಟ್ಟಂತಾಗುತ್ತಿದೆ ಎಂಬುದು ಸಾರ್ವಜನಿಕರ ದೂರು. ತಾಲ್ಲೂಕು ಕೇಂದ್ರವಾಗಿ ದಶಕಗಳೇ ಕಳೆದರೂ ಸಮರ್ಪಕ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸ್ಥಳೀಯ ಆಡಳಿತ ಮಾತ್ರ ಸಂಪೂರ್ಣವಾಗಿ ವಿಫಲವಾಗಿದೆ. ಈ ಕುರಿತು ಪಪಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದರೂ ಯಾವುದೆ ಮನ್ನಣೆ ದೊರೆಯದೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬಸ್‌ ನಿಲ್ದಾಣದಿಂದ ಅಂಚೆ ಕಚೇರಿವರೆಗಿನ ಹೈ ಮಾಸ್ಟ್‌ ದೀಪಗಳಿದ್ದರೂ ಎರೆಡೂ ವರ್ಷಗಳಿಂದ ಉರಿದಿಲ್ಲ,  ಅಧಿಕಾರಿಗಳು ಮಾತ್ರ ಅನುದಾನ ಬರೋವರೆಗೂ ಇತ್ತ ಕಡೆ ಗಮನ ಹರಿಸೊದಿಲ್ಲ ಅಂತಾ ಹೇಳ್ತಾ ಇದಾರೆ. ಅಲ್ಲಿವರೆಗೂ ಇಲ್ಲಿ ಬಿದ್ದು ಯಾರ ಸತ್ರೆ ಅವರಿಗೇನು ಕೇಳೊರೇ ಇಲ್ಲ.

-ಶಶಿಧರ ದೇಗಾವಿ, ಸ್ಥಳೀಯ ನಿವಾಸಿ

ಕೂಡಲೇ ಸಂಬಂದಪಟ್ಟ ಅಧಿಕಾರಿಗಳು  ಸಮಸ್ಯೆಯನ್ನು ಪರಿಹರಿಸಿ ಸಾರವ್ಜನಿಕರ ಸಂಚಾರಕ್ಕೆ ಬೆಳಕು ಆಗುತ್ತಾರೋ ಇಲ್ಲವೋ ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

You May Also Like

ವಿಕೆಂಡ್ ಮೀಟಿಂಗ್ ನಲ್ಲಿ ಮೂರನೇ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸುತ್ತಾ ಬಿಜೆಪಿ?

ಬಿಜೆಪಿ ಕೋರ್ ಕಮೀಟಿಯ ಮೀಟಿಂಗ್ ಗೆ ಇದೀಗ ಹೆಚ್ಚು ಮಹತ್ವ ಬಂದಿದ್ದು ವಿಕೇಂಡ್ ಮೀಟಿಂಗ್ ಯಾವ ನಿರ್ಧಾರಕ್ಕೆ ಸಾಕ್ಷಿಯಾಗಲಿದೆ ಎನ್ನುವುದು ಆಕಾಂಕ್ಷಿಗಳಲ್ಲಿ ಆಸಕ್ತಿ ಮೂಡಿಸಿದೆ.

ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಮಾತ್ರ ಪಡಿತರ ಧಾನ್ಯ ವಿತರಣೆ: ಕೊತಬಾಳ ಗ್ರಾಪಂ ನಿರ್ದಾರ

ಗದಗ: ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಏನೆಲ್ಲ ನಿರ್ಧಾರಗಳನ್ನು ತೆಗೆದುಕೊಂಡರೂ ಜನರು ಮಾತ್ರ ಇನ್ನು ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಆದ್ರೆ ಗ್ರಾಮ ಪಂಚಾಯತಿ ಒಂದು ಮನಸ್ಸು ಮಾಡಿದ್ರೆ ಏನೆಲ್ಲವೂ ಸಾಧ್ಯ ಅನ್ನೋದು ತೋರಿಸಿಕೊಟ್ಟಿದೆ ಆ ಊರಿನ ಗ್ರಾಮ ಪಂಚಾಯತಿ.

ಅಶ್ಲೀಲ ಪೋಟೋ ನೋಡು, ವರದಕ್ಷಿಣೆ ತರುವಂತೆ ಪತಿಯಿಂದ ವೈದ್ಯೆಗೆ ಕಿರುಕುಳ!

ಬೆಂಗಳೂರು : ಪತಿಯು ಅಶ್ಲೀಲ ವಿಡಿಯೋ ನೋಡುವಂತೆ ಪೀಡಿಸುತ್ತಿದ್ದಾನೆ ಎಂದು ಆರೋಪಿಸಿ ಪತ್ನಿ ದೂರು ದಾಖಲಿಸಿರುವ ಘಟನೆ ನಡೆದಿದೆ.

ಸೀತಾಲಹರಿಯ ಸುಪರ್ ಸ್ಪ್ರೆಡರ್ ಯಾರು?: ಪ್ರಾಥಮಿಕ ಸಂಪರ್ಕದಲ್ಲೇ 11 ಜನರಿಗೆ ಸೋಂಕು!

ಸುಪರ್ ಸ್ಪ್ರೆಡರ್ ಕುರಿತು ಉತ್ತರಪ್ರಭ ವಾರದ ಹಿಂದೆ ವಿವರವಾಗಿ ಬರೆದಿತ್ತು. ಟ್ರೇಸಿಂಗ್ ಪ್ರಕ್ರಿಯೆಯಲ್ಲಿ (ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದ ಹುಡುಕಾಟ) ಲೋಪದೋಷ ಆಗುತ್ತಿರುವುದಕ್ಕೆ ಈ ತರಹದ ಸುಪರ್ ಸ್ಪ್ರೆಡರ್ ತಮಗೇ ಅರಿವಿಲ್ಲದಂತೆ ಸೋಂಕನ್ನು ಹರಡಿಸುತ್ತ ಹೋಗುತ್ತಾರೆ.