ಮುಂಬಯಿ : ಒಮ್ಮೆ ಸೋಂಕಿನಿಂದ ಗುಣವಾದರೂ ಮತ್ತೊಮ್ಮೆ ಅದರ ಲಕ್ಷಣ ಕಂಡು ಬಂದರೆ, ಮೊದಲಿಗಿಂತಲೂ ಹೆಚ್ಚಿನ ಅಪಾಯ ಎದುರಿಸಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ದೇಶದಲ್ಲಿ ಸದ್ಯ ಕೊರೊನಾ ತಾಂಡವಾಡುತ್ತಿದೆ. ಕೆಲವರಲ್ಲಿ ಜೂನ್ ತಿಂಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಆದರೆ, ಜುಲೈ ತಿಂಗಳಲ್ಲಿ ಮತ್ತೆ ಅವರಲ್ಲಿ ಅದರ ಲಕ್ಷಣಗಳು ಕಂಡು ಬಂದಿದ್ದವು. ಆದರೆ, ಮೊದಲಿಗಿಂತಲೂ ಎರಡನೇ ಬಾರಿ ಅದರ ತೀವ್ರತೆ ಹೆಚ್ಚಾಗಿ ಕಂಡು ಬಂದಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಈ ಸಂದರ್ಭದಲ್ಲಿ ಉಸಿರಾಟದ ತೊಂದರೆ, ಪಾರ್ಶ್ವವಾಯು, ಹೃದಯಾಘಾತ ಸೇರಿದಂತೆ ಮತ್ತೆ ಹಲವು ತೊಂದರೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಈ ರೋಗದ ಲಸಿಕೆ ಅವಶ್ಯವಾಗಿದೆ. ಸರ್ಕಾರ ಇದಕ್ಕೆ ಬೇಕಾದಷ್ಟು ಹಣ ವ್ಯಯಿಸಿ, ಜನರ ಪ್ರಾಣ ಉಳಿಸಬೇಕಿದೆ.