ಗದಗ: ಜಿಲ್ಲೆಯಲ್ಲಿಂದು ಕೂಡ 99 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಈವರೆಗೆ 1480 ಸೋಂಕಿತರು ಪತ್ತೆಯಾದಂತಾಗಿದೆ.

ಇಂದು 43 ಜನ ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಟ್ಟು 553 ಜನ ಈವರೆಗೆ ಬಿಡುಗಡೆ ಹೊಂದಿದ್ದಾರೆ. ಸದ್ಯ 913 ಸಕ್ರೀಯ ಪ್ರಕರಣಗಳಿದ್ದು, 02 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಮೃತರ ಸಂಖ್ಯೆ 34 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಹೆಲ್ಥ್ ಬುಲೆಟಿನ್ ತಿಳಿಸಿದೆ.

ಕೋವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳ ವಿವರ

ನಗರ ಸಭೆಯ ವ್ಯಾಪ್ತಿಯ ಅಂಜುಮನ್ ಕಾಲೇಜ ಹತ್ತಿರ, ವಿವೇಕಾನಂದ ನಗರ, ಜನತಾ ಕಾಲನಿ, ಜಿಮ್ಸ್, ಕಳಸಾಪುರ ರಸ್ತೆ, ಟ್ಯಾಗೋರ ರೋಡ, ಕೇಶವ ನಗರ, ಖಾನತೋಟ, ಯಲಿಗಾರ ಪ್ಲಾಟ, ಸೇವಾಲಾಲ ನಗರ ಹತ್ತಿರ, ಗಂಗಿಮಡಿ, ಕರಿಸಿದ್ಧಮಠ ಓಣಿ, ಶಿವಾನಂದ ನಗರ, ಗಾಂಧೀ ವೃತ್ತದ ಹತ್ತಿರ, ರಾಜೀವಗಾಂಧೀ ನಗರ, ಹೆಲ್ತ ಕ್ಯಾಂಪ್, ಕಿಲ್ಲಾ ಓಣಿ, ಶಾಂತಿ ಟಾಕಿಸ್ ಹಿಂಬಾಗ, ಹುಡ್ಕೋ ಕಾಲನಿ ಮೊದಲನೇ ತಿರುವು, ಸುರಪುರ ಆಸ್ಪತ್ರೆ ಹತ್ತಿರ.

ಗದಗ ತಾಲೂಕಿನ ಲಕ್ಕುಂಡಿ, ಬಿಂಕದಕಟ್ಟಿ, ಹುಲಕೋಟಿ, ಅಂತೂರ-ಬೆಂತೂರ, ಮಲ್ಲಸಮುದ್ರ, ಹುಲಕೋಟಿ, ಕುರ್ತಕೋಟಿ, ಶಿರಹಟ್ಟಿ ಪಟ್ಟಣದ ದ್ಯಾಮವ್ವ ದೇವಸ್ಥಾನದ ಹತ್ತಿರ, ಹಳ್ಳದಕೇರಿ ನಗರ, ಒಂದನೇ ಬಸನಿಲ್ದಾಣ ಹತ್ತಿರ.

ಶಿರಹಟ್ಟಿ ತಾಲೂಕಿನ ಯಳವತ್ತಿ, ಶಿಗ್ಲಿ, ಬಾಳೆಹೊಸೂರ, ಬೆಳ್ಳಟ್ಟಿ, ರಾಮಗೇರಿ, ಮಾಗಡಿ, ಸುವರ್ಣಗಿರಿ ತಾಂಡಾ, ಗೊಜನೂರ. ಲಕ್ಷ್ಮೇಶ್ವರದ ಬಸಾಪುರ ಓಣಿ.

ಗಜೇಂದ್ರಗಡದ ಬಸವೇಶ್ವರ ನಗರ, ನರಗುಂದ ತಾಲೂಕಿನ ಕೊಣ್ಣೂರ, ಹುಣಶಿಕಟ್ಟಿ, ರೋಣ ತಾಲೂಕಿನ ನಾಗರಸಕೊಪ್ಪ, ನಿಡಗುಂದಿ, ನವಲಗುಂದ ತಾಲೂಕಿನ ನಾಗರಹಳ್ಳಿ.

ಮುಂಡರಗಿ ಪಟ್ಟಣದ ಬಸ ನಿಲ್ದಾಣದ ಹತ್ತಿರ, ಹೇಮರೆಡ್ಡಿ ಮಲ್ಲಮ್ಮ ನಗರ, ಟಿ.ಎಲ್.ಎಚ್.ಸ್ಟಾಫ್ ಕ್ವಾಟರ್ಸ,ಭಜಂತ್ರಿ ಓಣಿ, ಅನ್ನದಾನೇಶ್ವರ ನಗರ, ಕಡಲಿಪೇಟ, ಅಂಬಾಭವಾನಿ ನಗರ, ಸಿದ್ದಲಿಂಗನಗರ,
ಮುಂಡರಗಿ ತಾಲೂಕಿನ ಡಂಬಳ, ಬಾಗೇವಾಡಿ, ಕಕ್ಕೂರ ತಾಂಡಾ, ರಾಮೇನಹಳ್ಳಿ, ಹೆಸರೂರ, ಬರದೂರ, ಹಮ್ಮಗಿ, ಹಿರೇವಡ್ಡಟ್ಟಿ,

ಮೃತರ ವಿವರ
ಗದಗ-ಬೆಟಗೇರಿ ನಗರಸಭೆಯ ಬೆಟಗೇರಿ ನಿವಾಸಿ 62 ವರ್ಷದ ಪುರುಷ ಪಿ-102157 ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 25 ರಂದು ಕೋವಿಡ್-19 ದೃಢಪಟ್ಟಿದ್ದು, ತೀವ್ರ ಉಸಿರಾಟ ತೊಂದರೆ ಹಾಗೂ ನಿಮೋನಿಯಾದಿಂದಾಗಿ ಜುಲೈ 30 ರಂದು ಮೃತಪಟ್ಟಿರುತ್ತಾರೆ.
ಗದಗ ತಾಲ್ಲೂಕಿನ ಕುರ್ತಕೋಟಿ ನಿವಾಸಿ 70 ವರ್ಷದ ಪುರುಷ ಪಿ-107191 ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 27 ರಂದು ಕೋವಿಡ್-19 ದೃಢಪಟ್ಟಿದ್ದು, ನಿಮೋನಿಯಾ ಹಾಗೂ ಹೃದಯ ಸಂಬಂಧಿತ ಕಾಯಿಲೆಯಿಂದ ಜುಲೈ 27 ರಂದು ಮೃತಪಟ್ಟಿರುತ್ತಾರೆ ಎಂದು ವೈದ್ಯಕೀಯ ವರದಿಯಿಂದ ತಿಳಿದು ಬಂದಿರುತ್ತದೆ.
ಮೃತರ ಅಂತ್ಯ ಕ್ರಿಯೆಯನ್ನು ಕೋವಿಡ್-19ರ ಮಾರ್ಗಸೂಚಿಗಳನ್ವಯ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ತಾ.ಪಂ ಇಒ ಲಂಚ ಪಡೆಯುವ ವೇಳೆ ಎಸಿಬಿ ದಾಳಿ

ಲಂಚ ಪಡೆಯುವ ವೇಳೆ ಸಿಕ್ಕಿಬಿದ್ದ ತಾ.ಪಂ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ತಾ.ಪಂ ಇಒ ಜನರಿಂದ ಲಂಚ ಪಡೆಯುವ ವೇಳೆ ಎಸಿಬಿ ದಾಳಿ ಮಾಡಿದ್ದು, ಇಒ ಸಿಕ್ಕಿಬಿದ್ದಿದ್ದಾನೆ.

ಪಾಪ.. ಕೊಪ್ಪಳದಲ್ಲಿ ಭಿಕ್ಷೆಯೇ ಬದುಕಾಗಿಸಿಕೊಂಡವರ ಗತಿ ಏನು..?

ಕೊಪ್ಪಳ: ಮುಂಬೈಯಿಂದ ಪಿ-1173 ಸೋಂಕಿತ ಪ್ರಯಾಣಿಸಿದ್ದ ಬಸ್ ನಲ್ಲಿ 9 ಜನ ಭಿಕ್ಷುಕರು ಪ್ರಯಾಣಿಸಿದ್ದರಂತೆ. ಈ…

ಕನ್ನಡ ನಾಡು ನುಡಿಗೆ ಜಕ್ಕಲಿ ಗ್ರಾಮದ ಕೊಡುಗೆ ಅಪಾರ :ವಿವೇಕಾನಂದಗೌಡ ಪಾಟೀಲ

ಉತ್ತರಪ್ರಭ ಸುದ್ದಿ ನರೆಗಲ್ಲ: ಕನ್ನಡ ನಾಡು ನುಡಿಗೆ ಗದಗ ಜಿಲ್ಲೆಯ ಜಕ್ಕಲಿ ಗ್ರಾಮ ಅಪಾರವಾದ ಕೊಡುಗೆ…

ಶುಂಠಿ ವ್ಯಾಪಾರಿಯಿಂದ ಮುಂಡರಗಿ ಪೊಲೀಸ್ ಸ್ಟೇಶನ್ ಗೆ ಸೋಂಕಿನ ಸಂಕಟ..!

ಮುಂಡರಗಿ: ಕೊಡಗು ಜಿಲ್ಲೆಯ ಶುಂಠಿ ವ್ಯಾಪಾರಿಯೊಬ್ಬನಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಆದ್ರೆ ಆತನ ಟ್ರಾವೆಲ್ ಹಿಸ್ಟರಿ…