ಸ್ಪೀಕರ್ ಕಳಿಸಿದ್ದ ಅನರ್ಹತೆ ಕುರಿತಾದ ನೋಟಿಸ್ ನಿಂದ ಆತಂಕಕ್ಕೆ ಬಿದ್ದಿದ್ದ ಸಚಿನ್ ಪೈಲಟ್ ಬಣದ 19 ಶಾಸಕರಿಗೆ ಹೈಕೋರ್ಟಿನಿಂದ ಕೊಂಚ ರಿಲೀಫ್ ಸಿಕ್ಕಂತಾಗಿದೆ.

ಜೈಪುರ: ಸ್ಪೀಕರ್ ನೋಟಿಸ್ ಮತ್ತು ಪಕ್ಷಾಂತರ ನಿಷೇಧ ಕಾಯಿದೆಯನ್ನು ಪ್ರಶ್ನಿಸಿ ದಾವೆ ಸಲ್ಲಿಸಲು ತಮಗೆ ಸಮಯಾವಕಾಶ ನೀಡಿ ಎಂದು ಸಚಿನ್ ಪೈಲಟ್ ಬಣದ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಇಂದು ಮಧ್ಯಾಹ್ನ ನಡೆಸಿದ ರಾಜಸ್ತಾನ ಹೈಕೋರ್ಟ್, ಹೊಸ ದಾವೆ ಸಲ್ಲಿಸಲು ಕಾಲಾವಕಾಶ ನೀಡಿದೆ.

ಇದರಿಂದ ಸದ್ಯಕ್ಕೆ ಅನರ್ಹತೆಯ ದೊಣ್ಣೆಯಿಂದ ಪೈಲಟ್ ಬಣದ ಶಾಸಕರು ತಪ್ಪಿಸಿಕೊಂಡಿದ್ದಾರೆ.

ಶಾಸಕರ ಅನರ್ಹತೆ ಕುರಿತಂತೆ ನೋಟಿಸ್ ಹೊರಡಿಸಿದ್ದ ಸ್ಪೀಕರ್, ನೋಟಿಸ್ಗೆ ಕೂಡಲೇ ಉತ್ತರಿಸುವಂತೆ 19 ಶಾಸಕರಿಗೆ ಸೂಚಿಸಿದ್ದರು. ನೋಟಿಸ್ಗಳನ್ನು ಶಾಸಕರ ಮನೆಯ ಗೋಡೆಗಳಿಗೆ ಅಂಟಿಸಲಾಗಿತ್ತು.

ಸ್ಪೀಕರ್ ಕ್ರಮ ಪ್ರಶ್ನಿಸಿ ದಾವೆ ಸಲ್ಲಿಸಲು ಸಮಯಾವಕಾಶ ನೀಡಿ ಎಂದು ಪೈಲಟ್ ಬಣದ ಶಾಸಕರು ಮುಂಜಾನೆ ಹೈಕೋರ್ಟ್ ಮೊರೆ ಹೋಗಿದ್ದರು.

Leave a Reply

Your email address will not be published. Required fields are marked *

You May Also Like

ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಬುಡಮೇಲು ಸಮೇತ ಜನರೇ ಕಿತ್ತೆಸೆಯುತ್ತಾರೆ – ಸಿ.ಟಿ.ರವಿ ವಾಗ್ದಾಳಿ

ಕುಕ್ಕರ್ ಬಾಂಬರ್ ಗಳಿಗೆ ಬಿರಿಯಾನಿ ತಿನ್ನಿಸುವವರು ಅಧಿಕಾರಕ್ಕೆ ಬಂದರೆ ಭದ್ರತೆಗೆ ಅಪಾಯ !ನಿಡಗುಂದಿ: ರಾಜ್ಯದಲ್ಲಿ ಕುಕ್ಕರ್…

ರೈಲು ಹಳಿ ದುರಂತ: 16 ಸಾವು

ಮಹಾರಾಷ್ಟ್ರ:ನಿನ್ನೆಯಷ್ಟೆ ವಿಶಾಖಪಟ್ಟಣ ದುರಂತದ ಬೆನ್ನಲ್ಲೆ ಇಂದು ಔರಂಗಾಬಾದ್ ಪ್ರಕರಣ ಜನರನ್ನು ಬೆಚ್ಚಿ ಬೀಳಿಸಿದೆ. ಔರಂಗಾಬಾದ್ ರೈಲು…

ರಾಮ ಮಂದಿರ: 2 ಸಾವಿರ ಅಡಿ ಕೆಳಗೆ ಇಡಲಾಗುತ್ತಿರುವ ‘ಟೈಮ್ ಕ್ಯಾಪ್ಸುಲ್’ನಲ್ಲಿ ಏನಿರುತ್ತೆ?

ದೇಶದಲ್ಲಿ ರಾಮಜನ್ಮಭೂಮಿ ವಿವಾದಕ್ಕೆ ಕಳೆದ ವರ್ಷ ನವೆಂಬರ್ ನಲ್ಲಿ ಸುಪ್ರೀಂಕೋರ್ಟ್ ಒಂದು ‘ಅಂತಿಮ’ ಪರಿಹಾರ ನೀಡಿದ ನಂತರ, ಅಲ್ಲಿ ರಾಮ ಮಂದಿರ ನಿರ್ಮಿಸುವ ಕೆಲಸಕ್ಕೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿಗೆ ಉಸ್ತುವಾರಿ ನೀಡಲಾಗಿದೆ.

ಬ್ರೆಜಿಲ್‍,ಆಫ್ರಿಕಾ ವೈರಸ್ ವಿಚಾರದಲ್ಲಿ ಕೇಂದ್ರದ ನಿರ್ಲಕ್ಷ್ಯ; ರಾಹುಲ್‍ ಕಿಡಿ

ದೇಶದಲ್ಲಿ ಮತ್ತೆ ಏರಿಕೆಯತ್ತ ಸಾಗಿರುವ ಕೊರೊನಾ ಸೋಂಕಿನ ವಿಚಾರದಲ್ಲಿ ಕೇಂದ್ರ ಸರ್ಕಾರ ನಿಷ್ಕಾಳಜಿ ತೋರಿಸುತ್ತಿದೆ ಎಂದು ಕಾಂಗ್ರೆಸ್‍ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.