ಕೊರೋನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ವೈರಸ್ ನಿರ್ಮೂಲನೆಗೆ ಶುಚಿತ್ವ ಕಾಪಾಡಿಕೊಳ್ಳುವುದು ಅಗತ್ಯ. ದಿನಕ್ಕೆ ಐದಾರು ಸಲ ನೀರು ಮತ್ತು ಸೋಪ್‍ನಿಂದ ಕೈ ತೊಳೆಯುವುದು ಒಳ್ಳೆಯದು.

ಮೊಸರು, ಹಾಲಿನ ಪ್ಯಾಕೆಟ್‍ಗಳ ಮೇಲೂ ಕೆಲ ಗಂಟೆಗಳ ಕಾಲ ಕೊರೋನಾ ವೈರಸ್ ಜೀವಂತ ಇರುವ ಕಾರಣ ಪ್ಯಾಕೆಟ್‍ಗಳನ್ನು ತೊಳೆದು, ನಂತರ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು.

ಅಂತರ್ಜಾಲದಲ್ಲಿ ಕೆಲವು ವಿಡಿಯೋಗಳು ಚಾಲ್ತಿಯಲ್ಲಿದ್ದು, ತರಕಾರಿ ಮತ್ತು ಹಣ್ಣುಗಳನ್ನು ಸೋಪ್ ಬಳಸಿ ತೊಳೆಯಬೇಕು ಎಂದು ತಪ್ಪು ಮಾಹಿತಿ ನೀಡಲಾಗುತ್ತಿದೆ. ಯಾವ ಕಾರಣಕ್ಕೂ ಸೋಪ್ ಅಥವಾ ಪಾತ್ರೆ ತೊಳೆಯುವ ಡಿಶ್ ಸೋಪ್ ಬಳಸಿ ತರಕಾರಿ ಮತ್ತು ಹಣ್ಣುಗಳನ್ನು ತೊಳೆಯಬಾರದು ಎಂದು ತಜ್ಞ ವೈದ್ಯರು ಅಭಿಪ್ರಾಯ ಪಡುತ್ತಾರೆ.

ಸೋಪ್‍ನಲ್ಲಿನ ರಾಸಾಯನಿಕಗಳು ಹಣ್ಣು, ತರಕಾರಿಗಳಲ್ಲಿ ಬೆರೆಯುವುದರಿಂದ ಅಸಾಧ್ಯ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ, ಎದೆ, ಜಠರ ಮತ್ತು ಕರುಳುಗಳಿಗೆ ಇದು ಅಪಾಯ ಒಡ್ಡುತ್ತದೆ. ತಣ್ಣೀರಿನಲ್ಲಿ ಸ್ವಚ್ಛವಾಗಿ ತೊಳೆದರೆ, ಶೇ. 95-97 ಸೂಕ್ಷ್ಮಕ್ರಿಮಿಗಳು ನಾಶವಾಗುತ್ತವೆ. ಹೀಗಾಗಿ ಒಂದಲ್ಲ, ಎರಡು ಸಲ ತಣ್ಣೀರಿನಿಂದ ತೊಳೆದರೆ ಸಾಕು ಎನ್ನುತ್ತಾರೆ ಆಹಾರ ತಜ್ಞರು ಮತ್ತು ವೈದ್ಯರು.

Leave a Reply

Your email address will not be published. Required fields are marked *

You May Also Like

ಕೊರೊನಾ ಕಾಟ: ರಾಜಸ್ಥಾನ ಗಡಿ ಬಂದ್!!

ಜೈಪುರ: ಮಹಾಮಾರಿಯ ಅಟ್ಟಹಾಸ ದೇಶದ ಹಲವು ರಾಜ್ಯಗಳಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಗಡಿ ಬಂದ್…

ಯಡಿಯೂರಪ್ಪ ದಮ್ ನಿಂದಲೇ ಸಿದ್ದು ವಿಪಕ್ಷ ನಾಯಕ: ಬಿ.ಸಿ.ಪಾಟೀಲ್

ಹಾವೇರಿ: ಯಡಿಯೂರಪ್ಪ ದಮ್ ನಿಂದಲೇ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನಾಗಿರೋದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್…

ಮದ್ಯಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್

ಮದ್ಯಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ನಾಳೆಯಿಂದ ಲಾಡ್ಜ್‌, ಬಾರ್‌ ಹಾಗೂ ಕ್ಲಬ್‌ಗಳಲ್ಲಿ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿದೆ.

ಪ್ರವಾಸಿಗರಿಂದ ಸೋಂಕು ಹರಡದಂತೆ ಮಾರ್ಗಸೂಚಿ: ಕೆ.ಸುಧಾಕರ್

ಕೊಡಗು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಂದ ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸಲು ನೂತನ ಮಾರ್ಗಸೂಚಿ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.