ಹುಬ್ಬಳ್ಳಿ: ಚಿನ್ನಾಭರಣ ಕದ್ದಿರೋ ಕಳ್ಳರನ್ನು ನೋಡಿದ್ದೇವೆ. ಮನೆ ದರೋಡೆ ಮಾಡಿರೋದನ್ನು ನೋಡಿದ್ದೇವೆ. ಆದ್ರೆ ಮಹಿಳೆಯರ ಬಟ್ಟೆ ಕದ್ದ ಕಳ್ಳನೀಗ ಪೊಲೀಸ್ ಅತಿಥಿಯಾಗಿದ್ದಾನೆ.

ಮನೆಯ ಮುಂದೆ ಅಥವಾ ಹಿತ್ತಲಲ್ಲಿ ಒಣಹಾಕಿದ ಮಹಿಳೆಯರ ಬಟ್ಟೆ ಕದಿಯುತ್ತಿದ್ದ ಕಳ್ಳ ಸಿಕ್ಕಿಬಿದ್ದು ಪೊಲೀಸ್ ಅತಿಥಿಯಾಗಿದ್ದಾನೆ.

ಹಲವು ದಿನಗಳಿಂದ ನಗರದ ನೇಕಾರನಗರ, ಈಶ್ವರನಗರ, ಜಂಗ್ಲಿಪೇಟ್ ಸೇರಿದಂತೆ ಹಲವು ಬಡಾವಣೆಗಳಲ್ಲಿ ಮನೆಗಳ ಮುಂಭಾಗ ಹಾಗೂ ಹಿತ್ತಲಲ್ಲಿ ಮಹಿಳೆಯರು ತಮ್ಮ ಬಟ್ಟೆಗಳನ್ನ ಒಣಹಾಕಿರೋದನ್ನ ಗಮನಿಸಿ, ಹಗಲು ಹಾಗೂ ರಾತ್ರಿ ವೇಳೆ ಈತ ಬಟ್ಟೆಗಳನ್ನ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ. ಪ್ರತಿ ದಿನ ಒಣಹಾಕಿದ ಬಟ್ಟೆ ಕಾಣದಾದ್ದರಿಂದ ಈ ವಿಷಯ ಇಲ್ಲಿನ ನಿವಾಸಿಗಳಿಗೆ ತಲರನೋವಾಗಿ ಪರಿಣಮಿಸಿತ್ತು.

ಯಾರು ತಮ್ಮ ಬಟ್ಟೆ ಕದಿಯುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಕಾದು ಕುಳಿತ ಇಲ್ಲಿನ ನಿವಾಸಿಗಳ ಕೈಗೆ ನಿನ್ನೆ ಈತ ರೆಡ್ ಹ್ಯಾಂಡ್ ಆಗಿ ಸಿಕ್ಕುಬಿದ್ದಿದ್ದಾನೆ.
ಬಟ್ಟೆ ಕದ್ದು ಪರಾರಿಯಾಗುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಹಿಡಿದು ಈತನನ್ನು ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿದ್ದಾರೆ. ನಂತರ ಇಲ್ಲಿನ ಕಸಬಾಪೇಟೆ ಪೊಲೀಸರಿಗೆ ಸ್ಥಳೀಯರು ಈತನನ್ನು ಒಪ್ಪಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಮುಂಡರಗಿ: ಬೈಕ್ ಅಪಘಾತ ಸವಾರ ಸ್ಥಳದಲ್ಲೆ ಸಾವು

ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನಲ್ಲಿ ನಡೆದಿದೆ. ಮುಂಡರಗಿ-ಬೂದಿಹಾಳ ರಸ್ತೆ ಮದ್ಯೆದಲ್ಲಿ ಅಪಘಾತ ಸಂಭವಿಸಿದ್ದು ರಾಮಚಂದ್ರ ಕಮ್ಮಾರ(36) ಸ್ಥಳದಲ್ಲಿಯೇ ಸಾವನ್ನಪ್ಪಿದ ಬೈಕ್ ಸವಾರ. ಮುಂಡರಗಿ ಪೊಲೀಸ್ ಟಾಣಾ ವ್ಯಾಪಿಯಲ್ಲಿ ಘಟನೆ ನಡೆದಿದೆ.

ಶಿವಮೊಗ್ಗ : ಜಿಲ್ಲೆಯಲ್ಲಿ ಕೊರೊನಾಗೆ ಮೊದಲ ಬಲಿ..!

ದಾವಣಗೆರೆ: ಜಿಲ್ಲೆ ಚನ್ನಗಿರಿಯ 56 ವರ್ಷ ಮಹಿಳೆ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಅನಾರೋಗ್ಯದ ನಿಮಿತ್ತ ಮಹಿಳೆ…

ಗಜೇಂದ್ರಗಡ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣಾ ಫಲಿತಾಂಶ 

ಗಜೇಂದ್ರಗಡ: ತೀವೃ ಕುತೂಹಲ ಕೆರಳಿಸುವುದಲ್ಲದೇ, ಪೈಪೋಟಿಗೆ ಕಾರಣವಾಗಿದ್ದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣಾ ಫಲಿತಾಂಶ ಮಂಗಳವಾರ ರಾತ್ರಿ ಪ್ರಕಟವಾಗಿದೆ.

ನಾಳೆ ಗಾಂಧಿ ಸ್ಮರಣೆ

ವಿಶ್ವವಿದ್ಯಾಲಯದಗಾಂಧಿ ಸಬರಮತಿ ಆಶ್ರಮದಲ್ಲಿ ಜ.30 ರಂದು ಮಹಾತ್ಮ ಗಾಂಧೀಜಿ ಅವರ ಪುಣ್ಯಸ್ಮರಣೆಯ ಅಂಗವಾಗಿ ಗಾಂಧಿ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.