ಲಕ್ನೋ: ಪ್ರತಿಷ್ಠಿತ ಸೈಕಲ್ ತಯಾರಿಕಾ ಕಂಪನಿ ವಿಶ್ವ ಬೈಸಿಕಲ್ ದಿನಾಚರಣೆಯ ದಿನದಂದೇ ಸ್ಥಗಿತಗೊಂಡಿದೆ. ಉದ್ಯೋಗಿಗಳಿಗೆ ಯಾವುದೇ ಸೂಚನೆ ನೀಡದೆ ಕಂಪನಿಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ನೌಕರಸ್ಥರು ಬೀದಿಗೆ ಬಂದಿದ್ದಾರೆ.

ಉತ್ತರ ಪ್ರದೇಶದ ಘಾಝಿಯಾಬಾದ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಟ್ಲಾಸ್ ಕಂಪನಿಯನ್ನು ನಷ್ಟದ ಕಾರಣ ಹೇಳಿ ಸ್ಥಗಿತಗೊಳಿಸಲಾಗಿದೆ. ಈ ಮೂಲಕ ಭಾರತದ ಸೈಕಲ್ ತಯಾರಿಕಾ ಕಂಪೆನಿಯ ಬಹುದೊಡ್ಡ ಸಂಸ್ಥೆ ಮುಚ್ಚಿದಂತಾಗಿದೆ.

ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳು ಕಾಲ ಕಂಪನಿಯನ್ನು ಬಂದ್ ಮಾಡಲಾಗಿತ್ತು. ಆದರೆ, ಜೂ. 1 ರಂದು ಕಂಪನಿಯನ್ನು ಮರಳಿ ಓಪನ್ ಮಾಡಲಾಗಿತ್ತು. ಎರಡು ದಿನಗಳ ಕಾಲ ನೌಕರಸ್ಥರು ಖುಷಿಯಿಂದಲೇ ಕೆಲಸ ಮಾಡಿದ್ದರು. ಆದರೆ, ನಿನ್ನೆ ಏಕಾಏಕಿ ಕಂಪನಿಯ ಬಾಗಿಲು ಮುಂದೆ, ಸಂಸ್ಥೆ ಮುಚ್ಚಿರುವ ಬಗ್ಗೆ ನೊಟೀಸ್ ಹಾಕಲಾಗಿತ್ತು. ಇದನ್ನು ಕಂಡ ನೌಕರಸ್ಥರು ಶಾಕ್ ಆಗಿದ್ದಾರೆ. ಈ ಮೂಲಕ ಸಾವಿರಾರು ನೌಕರಸ್ಥರು ಬೀದಿಗೆ ಬಂದಿದ್ದಾರೆ.

ಈ ಹಿಂದೆಯೂ ಸೈಕಲ್ ತಯಾರಿಕಾ ಕಂಪನಿಗಳು ಬಾಗಿಲು ಹಾಕಿಕೊಂಡಿದ್ದವು. ಅಟ್ಲಾಸ್ ಕಂಪನಿಯಲ್ಲಿ ಪ್ರತಿ ತಿಂಗಳು 2 ಲಕ್ಷಕ್ಕೂ ಅಧಿಕ ಸೈಕಲ್ ಗಳನ್ನು ತಯಾರಿಸಲಾಗುತ್ತಿತ್ತು. ಕಂಪನಿಯ ನಿರ್ಧಾರದಿಂದಾಗಿ ನೌಕರಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹಲವರು ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿ ಇನ್ನೂ ಎಷ್ಟು ತಿಂಗಳು ಇರಲಿದೆ ಅಪಾಯ!

ಬೆಂಗಳೂರು: ರಾಜ್ಯಕ್ಕೆ ಇನ್ನೂ ಮೂರು ತಿಂಗಳು ಮಹಾ ಆಪತ್ತು ಕಾದಿದೆ ಎಂಬ ಸ್ಫೋಟಕ ಸತ್ಯವೊಂದು ತಜ್ಞರಿಂದ…

ಈ ನದಿಗಳ ಜಲಮಾರ್ಗದಲ್ಲಿ ಸರಕು ಸಾಗಾಟಕ್ಕೆ ನಿರ್ಬಂಧ

ರಾಜ್ಯದ 5 ಜಲಮಾರ್ಗಗಳಲ್ಲಿ ಸರಕು ಸಾಗಾಣಿಕೆ ಮಾಡುವ ಮಹತ್ವದ ಯೋಜನೆಗೆ ಆರ್ಥಿಕವಾಗಿ ಲಾಭದಾಯಕವಾಗಿಲ್ಲ ಎಂಬ ವರದಿ ಹಿನ್ನೆಲೆಯಲ್ಲಿ ಹಿನ್ನಡೆಯಾಗಿದೆ.

ಶ್ರೀರಾಮ್ ಘೋಷಣೆಗೆ ಜೈ ಸಿಯಾ ರಾಮ್ ಎಂಬ ಪ್ರತ್ಯುತ್ತರ

ದೇಶದೆಲ್ಲೆಡೆ ಟೂಲ್‌ಕಿಟ್, ರೈತರ ಪ್ರತಿಭಟನೆ, ಪೆಟ್ರೋಲ್ ದರ ಏರಿಕೆ ಸುದ್ದಿಯಾಗುತ್ತಿದ್ದರೆ, ಪಶ್ಚಿಮ ಬಂಗಾಳದಲ್ಲಿ ಮಾತ್ರ ಘೋಷಣೆಗಳ ರಾಜಕೀಯ ನಡೆಯುತ್ತಿದೆ. ಚುನಾವಣೆ ಎದುರು ನೋಡುತ್ತಿರುವ ಪಶ್ಚಿಮ ಬಂಗಾಳದಲ್ಲಿ ಈಗಲೇ ಬಿಜೆಪಿ ಮತ್ತು ಆಡಳಿತರೂಢ ಟಿಎಂಸಿ ಪಕ್ಷಗಳು ತಮ್ಮ ಕಾರ್ಯಕರ್ತರನ್ನು ಸೆಳೆಯಲು ಘೋಷಣೆಗಳ ಮೊರೆ ಹೋಗಿದ್ದಾರೆ.

ಮದುಮಗ ಹಾರ ಹಾಕಿದ್ ಕೂಡಲೇ ಖುಷಿಯಾದ ಮದುಮಗಳು ಮಾಡಿದ್ದೇನು?

ಉತ್ತರ ಪ್ರದೇಶ: ಪ್ರತಿಯೊಬ್ಬರಿಗೂ ಮದುವೆ ಬಗ್ಗೆ ಅವರದ್ದೆ ಕನಸಿರುತ್ತೆ. ಆಸೆ-ಆಕಾಂಕ್ಷೆಗಳಿರುತ್ತೆ. ಆದರೆ ಇಲ್ಲೊಬ್ಬ ಯುವತಿ ಮದುಮಗ ತನ್ನ ಕೊರಳಿಗೆ ಹಾರ ಹಾಕಿದ ತಕ್ಷಣ ತನ್ನ ಪ್ರತಿಕ್ರಿಯೇ ಹೇಗಿರಬೇಕೆಂದು ವಿಭಿನ್ನ ಕಲ್ಪನೆಯೊಂದನ್ನು ಕಟ್ಟಿಕೊಂಡಿದ್ದಳು. ಈ ಕಾರಣಕ್ಕಾಗಿ ಏನೋ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.