ವಿಜಯಪುರ: ಕೊರೊನಾದ ಭಯಕ್ಕೆ ಜಿಲ್ಲೆಯ ಸಿಂಧಗಿ ತಾಲೂಕಿನ ಗಣಿಹಾರ ಗ್ರಾಮ ಸಂಪೂರ್ಣವಾಗಿ ಬೆಚ್ಚಿ ಬಿದ್ದಿದೆ.
ಗಂಟಲು ದ್ರವದ ವರದಿ ಬರುವ ಮುನ್ನವೇ ಸಾಂಸ್ಥಿಕ ಕ್ವಾರಂಟೈನ್ ನಿಂದ ಸೋಂಕಿತನಿಗೆ ಮುಕ್ತಿ ನೀಡಲಾಗಿತ್ತು. ಅಲ್ಲದೆ ನಂತರ ಹೋಮ್ ಕ್ವಾರಂಟೈನ್ ಆಗದೆ ಸೋಂಕಿತ ಗ್ರಾಮ ಸೇರಿದಂತೆ ಹಲವೆಡೆ ಓಡಾಟ ನಡೆಸಿದ್ದ. ಇನ್ನೂ ಸೋಂಕಿತನಿಗೆ ಶನಿವಾರ ಸೋಂಕು ಪತ್ತೆಯಾಗಿದ್ದು, ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಹೀಗಾಗಿ ಇಡೀ ಗ್ರಾಮ ಬೆಚ್ಚಿ ಬಿದ್ದಿದೆ. ಎಲ್ಲರಲ್ಲಿಯೂ ಆತಂಕ ಮನೆ ಮಾಡಿದೆ. ಸೋಂಕಿತ ವ್ಯಕ್ತಿ ಹಲವರೊಂದಿಗೆ ಓಡಾಡಿದ್ದಾನೆ. ಅಲ್ಲದೆ, ಸಿಕ್ಕ ಸಿಕ್ಕಲ್ಲಿ ಓಡಾಟ ನಡೆಸಿದ್ದಾನೆ. ಬಹುತೇಕ ಗ್ರಾಮದ ತುಂಬ ಅವನ ಸಂಚಾರ ನಡೆದಿದೆ. ಹೀಗಾಗಿ ಜನರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.