ಮಸ್ಕಿ: ಕ್ವಾರೆಂಟೈನ್ ಗೆ ಒಳಗಾಗಿ 20 ದಿನಗಳು ಕಳೆದು ಹೋದರು ಕೊರೊನಾ ವರದಿ ಬಂದಿಲ್ಲ ಮೊದಲು ಕೊರೊನಾ ವರದಿ ಕೊಡಿ ಎಂದು ಊಟ ಮಾಡದೇ ಕ್ವಾರೆಂಟೈನ್ ನೊಳಗೆ ಧರಣಿ ನಡಿಸಿದ ಘಟನೆ ಮಸ್ಕಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಮಹಾರಾಷ್ಟ್ರ ರಾಜ್ಯಕ್ಕೆ ತುತ್ತಿನ ಚೀಲ ತುಂಬಿಕೊಳ್ಳಲು ಗುಳೆ ಹೋಗಿದ್ದರು. ಲಾಕಡೌನ ಆಗಿರುವ ಹಿನ್ನಲೆಯಲ್ಲಿ ವಾಪಾಸ್ಸು ಸ್ವಗ್ರಾಮಕ್ಕೆ ತೆರಳಿದ್ದರು. ಕೋವಿಡ್-19 ಹರಡದಂತೆ ತಡಯುವುದಕ್ಕಾಗಿ 180ಕ್ಕೂ ಅಧಿಕ ಜನರಿಗೆ ಮಸ್ಕಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರೆಂಟೈನ್ ಮಾಡಲಾಗಿದೆ. ಇದೀಗ ಕ್ವಾರೆಂಟೈನ್ ಗೆ ಒಳಗಾಗಿ 20ದಿನಗಳು ಕಳೆದು ಹೋಗಿವೆ. ಇನ್ನೂ ಕೊರೊನಾ ವರದಿ ಬಂದಿಲ್ಲ. ಈ ಕ್ವಾರೆಂಟೈನ್ ನಲ್ಲಿರುವ ಇಬ್ಬರಿಗೆ ಪಾಸಿಟಿವ್ ವರದಿ ಕೊಟ್ಟಿದ್ದಿರಾ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿಗೆ ಕಳುಹಿಸಿದ್ದಿರಿ ನೆಗೆಟಿವ್ ಬಂದಿರುವ ಜನರಿಗೆ ಮನೆಗೆ ಕಳುಹಿಸಿ ಎಷ್ಟು ದಿನ ಒಳಗೆ ಇರಬೇಕೆಂದು ಕ್ವಾರೆಂಟೈನ್ ನಲ್ಲಿದ್ದ ಜನರು ಗುರುವಾರ ರಾತ್ರಿ ಊಟ ಮಾಡದೇ ಪಟ್ಟು ಹಿಡಿದರು ಎನ್ನಲಾಗಿದೆ. ಮೊದಲು ನಮಗೆ ಊಟ ಸರಿ ಕೊಡಿ ಇಲ್ಲವಾದರೆ ಕೊರೊನಾ ವರದಿ ತಂದು ನಗೆಟಿವ್ ಬಂದಿರುವರಿಗೆ ಮನೆಗೆ ಕಳುಹಿಸಿ ಎಂದು ಜನ ಅಧಿಕಾರಿಗಳ ವಿರುದ್ಧ ಅಕ್ರೋಶ ಹೊರ ಹಾಕಿದರಂತೆ. ಆದರೆ ತಹಶೀಲ್ದಾರ್ ಬಲರಾಮ ಕಟ್ಟಿಮನಿ ಅವರು ಬೇಜವಾಬ್ದಾರಿ ಯಿಂದ ಮಾತನಾಡುತ್ತಾರೆ ಎಂದು ಅಧಿಕಾರಿಗಳ ವಿರುದ್ಧ ದೂರಿದರು. ಕ್ವಾರೆಂಟೈನ್ ನಲ್ಲಿ ಮೂಲ ಸೌಕರ್ಯ ಮರಿಚೀಕೆಯಾಗಿವೆ. ಸರಿಯಾದ ಊಟದ ವ್ಯವಸ್ಥೆಯೂ ಇಲ್ಲ ಎಂದು ದೂರಿದರು.
ಕ್ವಾರೆಂಟೈನ್ ನಲ್ಲಿರುವ ಬಹುತೇಕ ಜನ ರೈತಾಪಿ ವರ್ಗದವರಿದ್ದು, ಮಳೆಯಾಗಿದೆ. ಹೊಲ ಹಸನು ಮಾಡಿ ಭಿತ್ತನೆ ಮಾಡಬೇಕು. ಹೀಗಾಗಿ ನಮ್ಮ ವರದಿ ನೆಗೆಟಿವ್ ಬಂದಲ್ಲಿ ನಮ್ಮನ್ನು ಬಿಟ್ಟು ಬಿಡಿ ಎಂದು
ಕ್ವಾರೆಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬರು ಅಸಮಾಧಾನ ಹೊರ ಹಾಕಿದರು ಎಂದು ತಿಳಿದು ಬಂದಿದೆ.
ನಮಗೆ ಮಹಾರಾಷ್ಟ್ರ ದಲ್ಲಿ 20 ದಿನ ಕ್ವಾರೆಂಟೈನ್ ಗೆ ಹಾಕಿದ್ದಾರೆ ಅಲ್ಲಿ ಕೊರೊನಾ ನೆಗಟಿವ್ ವರದಿ ಬಂದಿದೆ. ಮಸ್ಕಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರೆಂಟೈನ್ ಗೆ ಹಾಕಿ 20 ದಿನಗಳು ಕಳೆದಿವೆ ಇನ್ನೂವರೆಗೆ ಕೊರೊನಾ ವರದಿ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿ
ಊಟ ಮಾಡದೇ ಉಪವಾಸ ಮಲಗಿದ್ದಾರೆ ಎಂದು ತಿಳಿದು ಬಂದಿದೆ.
ಜಿಲ್ಲಾಧಿಕಾರಿಗಳು ಪರಿಶೀಲಿಸಿ ಕ್ವಾರೆಂಟೈನ್ ನಲ್ಲಿರುವವರ ಕೊರೊನಾ ವರದಿ ತರಿಸಿ ನಗೆಟಿವ್ ವರದಿ ಬಂದಿರುವ ಕೂಲಿ ಕಾರ್ಮಿಕರಿಗೆ ಕ್ವಾರೆಂಟೈನ್ ನಿಂದ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಫಾರ್ಮ್ ಹೌಸ್ ನಲ್ಲಿಯೇ ಗಾನ ಗಾರುಡಿಗನ ಅಂತಿಮ ಸಂಸ್ಕಾರ – ಸಾರ್ವಜನಿಕರಿಂದ ವೀಕ್ಷಣೆ!

ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣಂ ಅವರ ಅಂತ್ಯ ಸಂಸ್ಕಾರ ಇಂದು ಚೆನ್ನೈನ ರೆಡ್‍ ಹಿಲ್ ಫಾರ್ಮ್ ಹೌಸ್ ನಲ್ಲಿ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಕುಕನೂರಿನಲ್ಲಿ 23ನೇ ಕಾರ್ಗಿಲ್ ವಿಜಯೋತ್ಸವ ಆಚರಣೆ ಮಾಡಲಾಯಿತು.

ಕೊಪ್ಪಳ: ಜಿಲ್ಲೆಯ ಕುಕನೂರು ಹಾಗೂ ಯಲಬರ‍್ಗಾ ತಾಲೂಕಿನ. ಮಾಜಿ ಸೈನಿಕರ ಕ್ಷೇಮಾಭಿವೃದ್ದಿ ಸಂಘದ ಘಟಕದಿಂದ ಕುಕನೂರು…

ಕಿಯೋನಿಕ್ಸ್ ಅಧ್ಯಕ್ಷರಾಗಿ ಬಿಜೆಪಿ ನಾಯಕ ಹರಿಕೃಷ್ಣ ಬಂಟ್ವಾಳ್ ಆಯ್ಕೆ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಅವರಿಗೆ ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್…

ಡಿಕೆಸಿ ಅವರಿಗೇಕೆ ಈ ಸಂಶಯ

ಕುಂಬಳಕಾಯಿ ಕಳ್ಳ ಎಂದಕೂಡಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಡಿಕೆಸಿ ಅವರಿಗೆ ಏಕೆ ಈ ಸಂಶಯ ಎಂದು ಬಿಜೆಪಿ ಪಕ್ಷ ತನ್ನ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಪ್ರಶ್ನಿಸಿದೆ.