ಮಹಾರಾಷ್ಟ್ರ:ನಿನ್ನೆಯಷ್ಟೆ ವಿಶಾಖಪಟ್ಟಣ ದುರಂತದ ಬೆನ್ನಲ್ಲೆ ಇಂದು ಔರಂಗಾಬಾದ್ ಪ್ರಕರಣ ಜನರನ್ನು ಬೆಚ್ಚಿ ಬೀಳಿಸಿದೆ. ಔರಂಗಾಬಾದ್ ರೈಲು ಹಳಿ ಮೇಲೆ ಮಲಗಿರುವ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದ ಪರಿಣಾಮ 16 ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಎಲ್ಲರೂ ರೈಲು ಟ್ರಾಕ್ ಮೇಲೆ ರಾತ್ರಿ ಮಲಗಿದ್ದರು. ಈ ವೇಳೆ ರೈಲು ಹರಿದ ಪರಿಣಾಮ 16 ಕಾರ್ಮಿಕರು ಸಾವನ್ನಪ್ಪಿದ್ದಾರೆ‌.
ಇನ್ನೂ ನಾಲ್ವರಿಗೆ ಗಂಭೀರ ಗಾಯವಾಗಿದೆ. ಔರಂಗಾಬಾದ್ – ಜಾಲನಾ ಮಧ್ಯ ಘಟನೆ ಸಂಭವಿಸಿದೆ.
ಎಲ್ಲರೂ ಜಾಲನಾ ಎಮ್ ಆಯ್.ಡಿ.ಸಿ ಕಾರ್ಮಿಕರು ಎಂಬ ಮಾಹಿತಿ ಲಭ್ಯ ವಾಗಿದೆ.
ಎಲ್ಲಾ ಕಾರ್ಮಿಕರು ಮಧ್ಯಪ್ರದೇಶ ರಾಜ್ಯದ ನಿವಾಸಿಗಳಾಗಿದ್ದಾರೆ.
ಗಾಯಾಳುಗಳಿಗೆ ಔರಂಗಾಬಾದ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೈಲು ಸಂಚಾರ ಬಂದ್ ಇದೇ ಎಂದು ಭಾವಿಸಿ ರೈಲು ಟ್ರ್ಯಾಕ್ ಮೆಲೆ ಮಲಗಿದ್ದರು. ಬೆಳಿಗ್ಗೆ 6:30 ರ ಸಮಯಕ್ಕೆ ಘಟನೆ ಸಂಬಂಧಿಸಿದೆ.
ರೈಲು ಟ್ರಾಕ್ ಮೇಲಿಂದ ಕಾರ್ಮಿಕರು ನಡೆದುಕೊಂಡು ಬರುತ್ತಿದ್ದಾಗ ಹಳಿಯ ಮೇಲೆ ಮಲಗಿದ್ದರು ಎನ್ನಲಾಗಿದ್ದು ಸ್ಥಳಕ್ಕೆ ರೈಲ್ವೆ ಪೋಲಿಸರು ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಆಕ್ಸ್ ಫರ್ಡ್ ವಿವಿ ಕೋರೊನಾ ಲಸಿಕೆ : ಮೊದಲ ಹಂತದಲ್ಲಿ ಫಲಪ್ರದ

ಆಕ್ಸ್ ಫರ್ಡ್ ವಿವಿ ಅಭಿವೃದ್ಧಿಪಡಿಸುತ್ತಿರುವ ಕೋರೊನಾ ಲಸಿಕೆಯು ಆರಂಭಿಕ ಹಂತದಲ್ಲಿ ಭರವಸೆದಾಯಕ ಫಲಿತಾಂಶ ನೀಡಿದೆ.ಅಸ್ಟ್ರೋಜೈನೆಕಾ ಕಂಪನುಯ ಸಹಯೋಗದೊಮದಿಗೆ ಬ್ರಟನ್ನಿನ ಆಕ್ಸ್ ಫರ್ಡ್ ವಿವಿ

ಅಂಬ್ಯೂಲೆನ್ಸ್ ನಲ್ಲಿ ಜಿಂಕೆ ಮಾಂಸ ಸಾಗಣೆ..!

ಶಿವಮೊಗ್ಗ: ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಸರ್ಕಾರಿ ಕೋವಿಡ್-19 ವಿಶೇಷ ಆಂಬುಲೆನ್ಸ್ ದುರುಪಯೋಗಿಸಿಕೊಂಡು ಜಿಂಕೆ ಮಾಂಸ ಸಾಗಾಟ…

ಪಿಯು ಪರೀಕ್ಷೆಗೆ ನಿಯಮವೇನು?

ಬೆಂಗಳೂರ: ಇದೆ ಜೂ.18 ರಂದು ನಡೆಯಲಿರುವ ಪಿಯು ಇಂಗ್ಲೀಷ್ ಪರೀಕ್ಷೆ‌ ನಡೆಯಲಿದೆ. ಪರೀಕ್ಷೆಗೆ ಹಾಸ್ಟೆಲ್ ವಿದ್ಯಾರ್ಥಿಗಳು ಮತ್ತು ವಲಸೆ ಕಾರ್ಮಿಕರ ಮಕ್ಕಳಿಗೆ ತಮ್ಮ ಊರು ಅಥವಾ ಸಮೀಪದ ಊರುಗಳಲ್ಲೆ ಪರೀಕ್ಷೆ ಬರೆಯಲು ಪಿಯು ಬೋರ್ಡ್ ಅವಕಾಶ ನೀಡಿದೆ. ತಮ್ಮ ಹೆಸರು ಇರುವ ಆನ್ ಲೈನ್ ಪ್ರತಿಯನ್ನು ಪ್ರಿಂಟ್ ತೆಗೆದುಕೊಂಡು ಆಯ್ಕೆ ಮಾಡಿಕೊಂಡ ಕೇಂದ್ರದಲ್ಲಿ ಪರೀಕ್ಷೆ ಬರೆಯಬಹುದಾಗಿದೆ. ಈ ಬಗ್ಗೆ ಇಂದು ರಾಜ್ಯದ ವಿದ್ಯಾರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಲಿದ್ದು ಜೂ.7 ರ ಒಳಗಾಗಿ ಹೊರರಾಜ್ಯದ ವಿದ್ಯಾರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಹೊರಬೀಳಲಿದೆ.

ಮೋದಿ ವಿರುದ್ಧ ಗುಡುಗಿರುವ ಮಾಜಿ ಪ್ರಧಾನಿ!

ನವದೆಹಲಿ : ಚೀನಾ ಸಂಘರ್ಷದ ಕುರಿತು ಮಾತನಾಡಿರುವ ಪ್ರಧಾನಿ ತಾವು ಆಡುವ ಮಾತುಗಳ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಮತ್ತು ತಮ್ಮ ಸ್ಥಾನದ ಸಮರ್ಥನೆ ಮಾಡಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.