ಬೆಂಗಳೂರು : ಲಾಕ್ಡೌನ್ ಮಾನದಂಡಗಳನ್ನು ಸಡಿಲಿಸಿದ ನಂತರ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಏರಿಕೆಯಾಗಿದೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳಲು, ಆರೋಗ್ಯ ಇಲಾಖೆ ಎಲ್ಲ ನಾಗರಿಕರ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ.
ತಂತ್ರಜ್ಞಾನದ ಜೊತೆ ಸಾಂಪ್ರದಾಯಿಕ ವಿಧಾನಗಳೊಂದಿಗೆ ಸಂಯೋಜಿಸಲು ಇಲಾಖೆ ನಿರ್ಧರಿಸಿದೆ ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಜಾವೇದ್ ಅಕ್ತರ್ ಹೇಳಿದ್ದಾರೆ.
ಪರೀಕ್ಷಿಸುವುದರ ಜೊತೆಗೆ, ಇಲಾಖೆಯು ಆಪ್ತಮಿತ್ರ ಅಪ್ಲಿಕೇಶನ್ ಅನ್ನು ಬಳಸಲು ಪ್ರಾರಂಭಿಸಿದೆ. ಅಸ್ವಸ್ಥರನ್ನು ಪತ್ತೆಹಚ್ಚಲು ಈ ಅಪ್ಲಿಕೇಶನ್ ಅನ್ನು ಕಣ್ಗಾವಲು ತಂತ್ರಜ್ಞಾನ ಬಳಸಲಾಗುತ್ತದೆ.
ಇಲಾಖೆಯು ತಮ್ಮ ವಿವರಗಳನ್ನು ಸಂಗ್ರಹಿಸಲು ರಾಜ್ಯಾದ್ಯಂತ ಜನರಿಗೆ ಕರೆ ಮಾಡಲಾಗುತ್ತದೆ, ನಾಗರಿಕರಿಗೆ ಎಸ್ಎಂಎಸ್, ವಾಟ್ಸಾಪ್ ಸಂದೇಶಗಳು ಮತ್ತು ಇಮೇಲ್ಗಳನ್ನು ಸಹ ಕಳುಹಿಸಲಾಗುವುದು ಎಂದು ಅಖ್ತರ್ ಹೇಳಿದ್ದಾರೆ.