ಧಾರವಾಡ : ಜಿಲ್ಲೆಯೂ ಆರೇಂಜ್ ಜೋನ್ನಮಲ್ಲಿ ಇರುವ ಕಾರಣ ಹಾಗೂ ಹುಬ್ಬಳ್ಳಿಯಲ್ಲಿ ಕಂಟೋನ್ಮೆಂಟ್ ಜೋನ್ ಇರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಹೊರತು ಪಡಿಸಿ ಜಿಲ್ಲೆಯಲ್ಲಿ ನಾಲ್ಕು ದಿನಗಳ ಕಾಲ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಧಾರವಾಡಕ್ಕೆ ಷರತ್ತು ಬದ್ಧ ಸಡಿಲಿಕೆ ನೀಡಲಾಗಿದೆ. ಗ್ರಾಮೀಣ ಭಾಗಕ್ಕೆ ಕೂಡಾ ಸಡಿಲಿಕೆ ನೀಡಲಾಗಿದೆ. ಈಗಾಗಲೇ ಅಗತ್ಯ ಸರಕು ಸಾಗಣೆ, ಉತ್ಪಾದನೆಗೆ ಜಿಲ್ಲೆಯಲ್ಲಿ ಅವಕಾಶ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ಮುಗ್ಗಟ್ಟು ಕಾಯ್ದೆ ಅಡಿ ನೋಂದಾಯಿತ ಅಂಗಡಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಧಾರವಾಡ ಗ್ರಾಮೀಣ, ನವಲಗುಂದ, ಅಣ್ಣಿಗೇರಿ, ಅಳ್ನಾವರ, ಕಲಘಟಗಿ ಹಾಗೂ ಕುಂದಗೋಳ ಪಟ್ಟಣಗಳ ಅಂಗಡಿಗಳಿ ತೆರೆಯಲು ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಧಾರವಾಡ ನಗರದಲ್ಲಿ ವಾರದಲ್ಲಿ ನಾಲ್ಕು ದಿನಗಳಾದ ಸೋಮವಾರದಿಂದ ಗುರುವಾರವರೆಗೆ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಬೆಳಿಗ್ಗೆ 10 ರಿಂದ ಸಂಜೆ 6ರ ವರೆಗೆ ಮಾತ್ರ ಅಂಗಡಿಗಳನ್ನು ತೆರೆಯಲು ಜಿಲ್ಲಾಧಿಕಾರಿಯವರು ಲಿಖಿತ ಆದೇಶ ಹೊರಡಿಸುತ್ತಾರೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ಜನರು ಎಚ್ಚರ ತಪ್ಪಿದರೆ, ದೊಡ್ಡ ಅಪಾಯ ಸಂಭವಿಸಬಹುದು!!

ಜನರು ಎಚ್ಚರ ತಪ್ಪಿದರೆ, ದೊಡ್ಡ ಅಪಾಯ ಸಂಭವಿಸಬಹುದು!! ಬೆಂಗಳೂರು : ಕೊರೊನಾ ಲಾಕ್ ಡೌನ್ ನ್ನು…

ಪದವಿವೊಂದೇ ಸಾಲದು ಎಲ್ಲ ಜ್ಞಾನವೂ ಬೇಕು-ಡಾ.ಸಿ.ಎಂ.ಜೋಶಿ

ಉತ್ತರಪ್ರಭ ಸುದ್ದಿನಿಡಗುಂದಿ: ಅಧ್ಯಯನ ಕೇವಲ ಪದವಿ ಸಂಪಾದನೆಗೆ ಮಾತ್ರ ಸೀಮಿತವಾಗದೇ ಅದು ಸಮಗ್ರ ಜ್ಞಾನ ಪಡೆಯುವಂತಾಗಬೇಕು.…

ಡಬ್ ಮಲಗ್ತೀರೋ, ಹೋಳ್ ಮಗ್ಗಲಾಗಿಯೋ, ಬೆನ್ ಹಚ್ಚಿ ಮಲಗ್ತೀರೊ?: ಯಾವ ಪೊಸಿಷನ್ನಿನಲ್ಲಿ ಮಲಗಿದರೆ ಬೆಟರ್?

ಮಲಗುವ ಸ್ಥಿತಿಗಳಲ್ಲಿ ಹಲವಾರು ವಿಧ. ಕೆಲವರು ಹೊಟ್ಟೆ ಹಚ್ಚಿ ಡಬ್ ಮಲಗಿದರೆ, ಇನ್ನು ಕೆಲವರು ಹೋಳ್ ಮಗ್ಗುಲಾಗಿ ಅಂದರೆ ದೇಹದ ಒಂದು ಭಾಗದ ಮೇಲೆ ಮಲಗುತ್ತಾರೆ. ಕೆಲವರು ಬೆನ್ನು ಹಚ್ಚಿ ಮಲಗುತ್ತಾರೆ. ಈ ಮೂರರಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಸುರಕ್ಷಿತ? ಯಾವುದರಿಂದ ಏನು ಸಮಸ್ಯೆ ಆಗುತ್ತವೆ?

ಹೊಸ ಶಿಕ್ಷಣ ಪದ್ದತಿಗೆ ಅಣಿಯಾಗಿ- ಬಿ.ಸಿ.ನಾಗೇಶ

ಆಲಮಟ್ಟಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕಾಯಾ೯ಗಾರ“ಎಲ್ಲ ವ್ಯವಸ್ಥೆಗಳು ಅಮೂಲಾಗ್ರ ಬದಲಾಗಬೇಕು” ಸಚಿತ್ರ ವರದಿ : ಗುಲಾಬಚಂದ…