ಯಾರೋ ಒಬ್ಬರು ಚೈನ್ ಸ್ಮೋಕರ್ ಒಬ್ಬನನ್ನು ಕೇಳಿದರಂತೆ…, ಏನ್ರೀ ಅಷ್ಟೊಂದು ಸಿಗರೇಟ್ ಸೇದತೀರಾ ಅಂತ?  ಅದಕ್ಕೆ ಆ ಚೈನ್ ಸ್ಮೋಕರ್ ಹೇಳಿದ್ದು.. ಬಡ್ಡಿ ಮಗಂದು ಈ ಸಿಗರೇಟ್ ಅನ್ನೋದು ಆರೋಗ್ಯಕ್ಕೆ ತುಂಬಾ ಕೆಟ್ಟದ್ದು… ಅದಕ್ಕೇ ನಮ್ಮ ಊರಲ್ಲಿರೋ ಸಿಗರೇಟ್ಗಳನ್ನು ಸುಟ್ಟು ಬೂದಿ ಮಾಡ್ತಾ ಇದೀನಿ.. ಮುಂದಿನ ಜನಾಂಗದವರಿಗೆ ಸಿಗರೇಟ್ ಸಿಗಬಾರದು ನೋಡಿ… ನನ್ನೊಬ್ಬನ ಆರೋಗ್ಯ ಹಾಳಾದರೆ ಹಾಳಾಗಲಿ ಅಂದನಂತೆ….

Jokes appart…. ಪ್ರತಿಯೊಬ್ಬ ಸ್ಮೋಕರ್ ಅಂದ್ಕೊಳ್ಳೋದು…. ನನಗೆ ಮಾತ್ರ  ಏನೂ ಆಗಲ್ಲ ( ಸ್ಮೋಕ್ ಮಾಡ್ತಾನೆ ನೂರು ವರ್ಷ ಬದುಕಿದವರನ್ನು ನೋಡಿದೀನಿ… ಯಾವುದೇ ಚಟಗಳಿಲ್ಲದವರು 40 ವರ್ಷಕ್ಕೆ ಗೊಟಕ್ ಅಂದಿದ್ದನ್ನು ನೋಡಿದೀನಿ ) … ನಾನು ಆರೋಗ್ಯವಾಗೇ ಇರ್ತೀನಿ ಅನ್ನೋ ಹುಚ್ಚು ನಂಬಿಕೆ ಬಹುತೇಕರಲ್ಲಿರುತ್ತೆ.

ಹೀಗೆ ಮುಂದುವರೆಯುತ್ತಂತೆ ಚಟಗಾರನ ವಾದ ಸರಣಿ. ಈ ಮನಸ್ಸೆಂಬ ಮಾಯೆಯೇ ಹಾಗೆ. ತನಗೆ ಬೇಕಾದದ್ದನ್ನು ಸಾವಿರ ಕಾರಣ ಕೊಟ್ಟು ಸಮರ್ಥಿಸಿಕೊಳ್ಳುತ್ತೆ. ಮತ್ತು ಬೇಡವಾದದ್ದನ್ನು ತಿರಸ್ಕರಿಸಲೂ ನೂರು ಕಾರಣ ಹುಡುಕುತ್ತೆ

ಪ್ಯಾಸಿವ್ ಸ್ಮೋಕಿಂಗ್ ಕೂಡ ಆರೋಗ್ಯಕ್ಕೆ ಹಾನಿಕಾರಕ ಎಂದು ಗೊತ್ತಿದ್ದೂ ಗುಂಪಿನಲ್ಲಿ ಸಿಗರೇಟ್ ಸೇದುವವರ ಮತ್ತು ಅವರನ್ನು ದೂರವಿಡದೆ ಪಕ್ಕಕ್ಕೆ ನಿಲ್ಲುವ ಜನರ ಮನಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

ಕರೋನಾ ಮಹಾಮಾರಿಯ ಹರಡುವಿಕೆಯ ನಡುವೆಯೂ ತಾವು ಚಿರಂಜೀವಿಗಳೆಂಬಂತೆ ಬಿಂದಾಸ್ ಆಗಿ ಲಾಕ್ ಡೌನ್ ನಿಯಮಗಳನ್ನು ಮುರಿದು ರಸ್ತೆ ಗಳಲ್ಲಿ ತಿರುಗಾಡುವ, ಮಾಂಸ ದಂಗಡಿಗಳಿಗೆ ಮುಗಿ ಬೀಳುವ. ಸೋಷಿಯಲ್ ಡಿಸ್ಟನ್ಸಿ0ಗ್ ನಿಯಮಕ್ಕೆ ಕ್ಯಾರೇ ಅನ್ನದ ಜನಗಳನ್ನು ನೋಡಿದಾಗ, ಅದರಲ್ಲೂ ವಿದ್ಯಾವಂತರನ್ನು ನೋಡಿದಾಗ ಇವರ ಮನಸ್ಥಿತಿ ಅಧ್ಯಯನ ಯೋಗ್ಯ ಎನ್ನಿಸುತ್ತದೆ.

ವಿದ್ಯೆ ಮನುಷ್ಯನನ್ನು ಸುಶಿಕ್ಷಿತನನ್ನಾಗಿ ಮಾಡುತ್ತೆ ಎನ್ನುವ ಮಾತು ಪದೇ ಪದೇ ಸುಳ್ಳಾಗುತ್ತಿದೆ. ಕನಿಷ್ಠ ಕಾಮನ್ ಸೆನ್ಸ್ ಎನ್ನುವದು ಇಲ್ಲದಂತೆ ವರ್ತಿಸುವ ಇವರನ್ನು ಕಂಡರೆ ಕನಿಕರ ವಾಗುತ್ತೆ? ಇವರಿಗೆ ಬುದ್ದಿ ಬರಬೇಕಾದರೆ ಏನು ಮಾಡಬೇಕು? ನಾವು ಮಾಡಬೇಕಿಲ್ಲ. ಕರೋನಾ ಎಂಬ ಒಂದು ಕ್ಷುದ್ರ ಜೀವಿಯೇ ಇವರಿಗೆ ಬುದ್ದಿ ಕಲಿಸುವ ಕಾಲ ದೂರಿಲ್ಲ. ತಮ್ಮ ಮನೆಗೊಬ್ಬ ಸೋಂಕಿತ, ತಮ್ಮ ಮನೆಯಲ್ಲೊಂದು ಅನಾಹುತ ಆಗುವವರೆಗೆ ಇವರಿಗೆ ಬುದ್ದಿ ಬಾರದು.

ಆದರೆ ಚಿಂತೆ ಇರುವುದು ಇವರು ತಮ್ಮ ಜೀವವನ್ನೂ ಅಪಾಯಕ್ಕೊಡ್ಡಿ ಇತರರ ಜೀವವನ್ನೂ ಅಪಾಯಕ್ಕೊಡ್ಡುತ್ತಾರಲ್ಲ ಅದಕ್ಕೆ ಸಧ್ಯಕ್ಕೆ ಇವರನ್ನು ಸಮಾಜ_ವಿರೋಧಿಗಳೆನ್ನದೇ ವಿಧಿಯಿಲ್ಲ.

ಪೊಲೀಸರು ಇಂಥವರಿಗಾಗೇ #ಸಮಾಜ_ವಿರೋಧಿ ಎಂಬ ಅಳಿಸಲಾಗದ ಇಂಕಿನ ಸೀಲ್ ಮಾಡಿಸಿ ಇವರ ಹಣೆಗೇ ಒತ್ತಲಿ.. ಆಗಲಾದರೂ ಬುದ್ದಿ ಬಂದಿತು.

ಶಿವಯೋಗಿ ಪಾಟೀಲ್, ಉಪನ್ಯಾಸಕರು

Leave a Reply

Your email address will not be published. Required fields are marked *

You May Also Like

ಊರಳಿಯನಿಂದ ಬಂತು ಸೋಂಕು: ಆರ್.ಎಂ.ಪಿ ಡಾಕ್ಟರ್ ನಿಂದ ಸುತ್ತಲಿನ ಗ್ರಾಮಸ್ಥರಿಗೆ ಆತಂಕ..!

ಗದಗ: ಊರಳಿಯ ಮಾವನ ಮನೆಗೆ ಬಂದಿದ್ದಾನೆ. ಆದರೆ ಆತನಿಗೆ ಸೋಂಕು ತಗುಲಿರುವುದು ಸ್ವತ: ಆತನಿಗೂ ಗೊತ್ತಿರಲಿಲ್ಲ.…

ಬಿಜೆಪಿಗೆ ಹೆಚ್ಚು ಸ್ಥಾನ: ರಾಜ್ಯಸಭೆಯಲ್ಲೂ ಬಿಜೆಪಿ ಮೇಲುಗೈ

ನವದೆಹಲಿ : ರಾಜ್ಯ ಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಮೇಲ್ಮನೆಯಲ್ಲಿ ಬಿಜೆಪಿಯು ತನ್ನ ಸಂಖ್ಯಾ…

ಶರಣೇಗೌಡ ಬಯ್ಯಾಪುರ ಗೆಲುವಿಗೆ ಮಸ್ಕಿಯಲ್ಲಿ ಸಂಭ್ರಮ

 ಉತ್ತರಪ್ರಭ ವರದಿ:ವಿಠ್ಠಲ ಕೆಳೊತ ಮಸ್ಕಿ: ರಾಯಚೂರು ಕೊಪ್ಪಳ ವಿಧಾನ ಪರಿಷತ್ ಚುನಾವಣೆಯಲ್ಲಿ ಶರಣೇಗೌಡ ಪಾಟೀಲ್ ಬಯ್ಯಾಪೂರು…

ಕೊರೊನಾ ಪಾಸಿಟಿವ್ – ಜೆಡಿಎಸ್ ನಾಯಕನ ಹೈಡ್ರಾಮಾ!

ಮಂಡ್ಯ : ಜೆಡಿಎಸ್ ಮುಖಂಡರೊಬ್ಬರಿಗೆ ಕೊರೊನಾ ವೈರಸ್ ದೃಢಪಟ್ಟಿದ್ದು, ಆಸ್ಪತ್ರೆಗೆ ಹೋಗಲು ಕಿರಿಕ್ ಮಾಡಿರುವ ಘಟನೆ…