ಹೂಲಗೇರಿ: ತಂಬಾಕು ನಿರ್ಮೂಲನಾ ಜಾಗೃತಿ ದಿನಾಚರಣೆ ಕೆರೂರ ( ಬಾಗಲಕೋಟೆ ಜಿಲ್ಲೆ)
ಎಲ್ಲ ಭಾಗ್ಯಗಳಲ್ಲೇ ಆರೋಗ್ಯ ಭಾಗ್ಯವೇ ಮಿಗಿಲು. ಸಕಲ ಸೌಲಭ್ಯಗಳಿಗಿಂತಲೂ ನಮ್ಮ ಆರೋಗ್ಯಯುತ ಸದೃಢ ಶರೀರ ಕಾಪಾಡಿಕೊಳ್ಳುವುದೇ ಮುಖ್ಯ, ಆರೋಗ್ಯ ಸರಿಯಿಲ್ಲದಿದ್ದರೇ ಬದುಕು ಕಷ್ಟಸಾಧ್ಯ, ತಂಬಾಕು, ಮದ್ಯಪಾನ ಮತ್ತೀತರ ದುಶ್ಚಟಗಳಿಂದ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ ಇದು ವಿಪಯಾ೯ಸ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಶಿಕ್ಷಣಾಧಿಕಾರಿ ಶಶಿಕಾಂತ ಕುಮಟಿಹಳ್ಳಿ ಅಭಿಪ್ರಾಯಪಟ್ಟರು.


ಸಮೀಪದ ಹೂಲಗೇರಿ ಎಚ್.ಆರ್. ಪಾಟೀಲ ಸರ್ಕಾರಿ ಪ್ರೌಡಶಾಲೆಯಲ್ಲಿ ಗುರುವಾರ, ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ವತಿಯಿಂದ ಜರುಗಿದ ತಂಬಾಕು ನಿರ್ಮೂಲನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.ತಂಬಾಕು ತಿನ್ನುವುದರಿಂದ ಪ್ರತಿ ವರ್ಷ ಲಕ್ಷಾಂತರ ಜನ ಕ್ಯಾನ್ಸರ್ ಗೆ ತುತ್ತಾಗಿ ತಮ್ಮ ಅಮೂಲ್ಯ ಬಾಳನ್ನು ಗೋಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾಧಿಸಿದರು.


ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ಆರ್.ಎಸ್. ಬಾದವಾಡಗಿ ಮಾತನಾಡಿ, ತಂಬಾಕು ಚಟ ಎಲ್ಲೆಂದರಲ್ಲಿ ಹೆಚ್ಚಾಗುತ್ತಲ್ಲಿದೆ. ಇದರ ಹಾಗು ಮದ್ಯಪಾನಗಳ ವ್ಯಾಮೋಹಕ್ಕೆ ಈಡಾಗಿ ನಿರಂತರ ವ್ಯಸನೀಗಳಾದರೆ ಕ್ಯಾನ್ಸರ್ ದಂಥ ಇತರೆ ಗಂಭೀರ ಕಾಯಿಲೆಗಳಿಗೆ ತುತ್ತಾಗಿ ಚಟದಿಂದ ಚಟ್ಟಕ್ಕೆರಬೇಕಾಗದ ಅನಿವಾರ್ಯತೆ ಎದುರಾದೀತು. ಯುವ ಪೀಳಿಗೆ ದುಶ್ಚಟಗಳ ದುಷ್ಪರಿಣಾಮ ಅರಿತು ಅಮೂಲ್ಯ ಜೀವ ರಕ್ಷಿಸಿಕೊಳ್ಳಲು ದೃಢ ಮನಸ್ಸು ಮಾಡಬೇಕು. ಸುಂದರ ಜೀವಕ್ಕೆ ಮಾರಕವಾಗುವಂಥ ಚಟಗಳಿಂದ ದೂರ ಇರಬೇಕು. ಅಂಟಿಸಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು. ತಂಬಾಕು ನಿಮೂ೯ಲನೆಗಾಗಿ ಸರ್ಕಾರ ನಾನಾ ಕ್ರಮ ಕೈಗೊಂಡಿದೆ, ತಂಬಾಕು ಉತ್ಪನ್ನಗಳನ್ನು ಶಾಲೆ, ಕಾಲೇಜು ಆವರಣದ ಸುತ್ತಮುತ್ತಲೂ ನಿಷೇಧಿಸಲಾಗಿದೆ, ಆದರೂ ಯುವಕರು ತಂಬಾಕಿನತ್ತ ಆಕರ್ಷಣೆಗೊಳ್ಳುತ್ತಿರುವುದು ಖೇದಕರ ಎಂದರು.


ಆರೋಗ್ಯ ಇಲಾಖೆಯ ಎ.ಡಿ. ಜತ್ತಿ, ಶಿವಲಿಂಗ ಕರಗಣಿ, ಪದ್ಮಾ ಕಮತರ, ಸುಮಿತ್ರಾ ಹಂಬೂರ, ಸುರೇಶ ಹದ್ಲಿ ಮಾತನಾಡಿದರು.
ಪ್ರಮೀಳಾ ಮಹೇಂದ್ರಕರ, ಎಸ್.ಎಚ್. ರಾಠೋಡ, ಎಸ್.ಎಸ್. ಓಂಕಾರ, ಎಸ್.ಎನ್. ಕಲ್ಲಗೋನಾಳ ವೇದಿಕೆಯ ಮೇಲಿದ್ದರು. ಎಸ್.ಎಚ್. ರಾಠೋಡ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಸ್. ಓಂಕಾರ ಸ್ವಾಗತಿಸಿದರು. ಎಸ್.ಎನ್. ಕಲ್ಲಗೋನಾಳ ವಂದಿಸಿದರು.

Leave a Reply

Your email address will not be published. Required fields are marked *

You May Also Like

ಕೊರೊನಾ ಸೋಂಕಿತರಿಗೆ ಈ ಔಷಧಿ ನೀಡಬಾರದಂತೆ

ರೋಗಿಗಳು ಎಷ್ಟೇ ಅನಾರೋಗ್ಯಕ್ಕೆ ತುತ್ತಾಗಿದ್ದರೂ ಅವರಿಗೆ ಗಿಲೀಡ್‌ನ ರೆಮ್ಡೆಸಿವಿರ್ ಔಷಧ ನೀಡುವುದನ್ನು ಶಿಫಾರಸು ಮಾಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಲೋಕಹಿತಕ್ಕಾಗಿ ಮಿಡಿದ ಶರಣರ ಛಾಪು ಎಂದಿಗೂ ಅಳಿಯದು-ಶಾಸಕ ಶಿವಾನಂದ ಪಾಟೀಲ

ಚಿತ್ರವರದಿ: ಗುಲಾಬಚಂದ ಜಾಧವ ಆಲಮಟ್ಟಿ : ಲೋಕದ ಹಿತಕ್ಕಾಗಿ ಹಗಲಿರುಳು ಶ್ರಮಿಸಿರುವ ಕಾಯಕಯೋಗಿ ಕನಾ೯ಟಕ ಗಾಂಧಿ…

ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ದಂಧೆ

ಲಕ್ಷ್ಮೇಶ್ವರ :ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ದಂಧೆ ನಡೆಯುತ್ತಿದ್ದು ಅಕ್ಕಿಯ ಲೋಡಿನ ಗಾಡಿಯನ್ನು…

” ಶಿಕ್ಷಕ- ಮಕ್ಕಳಲ್ಲಿ ನವ ಚೇತನ ತುಂಬಿದ ವಿಷಯ ವೇದಿಕೆ ” ಚಿತ್ರಕಲೆ ಪಠ್ಯಗಳ ಜೀವಾಳ

ಉತ್ತರಪ್ರಭ ಸುದ್ದಿವಿಜಯಪುರ: ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಹಾಗು ವ್ಯಕ್ತಿತ್ವ ವಿಕಸನಕ್ಕೆ ಚಿತ್ರಕಲೆ ಸಹಕಾರಿಯಾಗಿದೆ ಅಲ್ಲದೇ ಪಠ್ಯಾಧಾರೀತ…