ಉತ್ತರಪ್ರಭ
ಪಾವಗಡ: ತುಮಕೂರು ಜಿಲ್ಲೆಯ ಗಡಿ ಪ್ರದೇಶವಾದ ಪಾವಗಡ ತಾಲ್ಲೂಕಿನ ತಮ್ಮ ಸ್ವ ಗ್ರಾಮವಾದ ಮಂಗಳವಾಡ ಗ್ರಾಮದಲ್ಲಿ ಅಂಗವಿಕಲರಾದ ಈರಣ್ಣ ಎಂಬ ವ್ಯಕ್ತಿ ಎಸ್.ಬಿ.ಐ ಬ್ಯಾಂಕಿನಿಂದ 50000 ಸಾಲ ಪಡೆದು ತಮ್ಮ ಜೀವನ ನಡೆಸುತ್ತಿದ್ದ ಪೆಟ್ಟಿಗೆಗೆ ಕಿಡಿಗೇಡಿಗಳು ರಾತ್ರಿ ಬೆಂಕಿ ಇಟ್ಟಿರುವ ಘಟನೆ ಮಂಗಳವಾಡ ಗ್ರಾಮದಲ್ಲಿ ನಡೆದಿದೆ ಸ್ಥಳಕ್ಕೆ ಅರಸೀಕೆರೆ ಪೊಲೀಸ್ ಠಾಣೆಯ ಎ.ಎಸ್.ಐ ಧನ್ರಾಜ್ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ, ತಪ್ಪಿತಸ್ಥರಿಗೆ ಕಂಡುಹಿಡಿದು ಶಿಕ್ಷಿಸುವಂತೆ ಹಾಗೂ ನಷ್ಟ ಪರಿಹಾರ ಮಾಡಿಕೊಡುವಂತೆ ಮೇಲ್ ಅಧಿಕಾರಿಗಳಲ್ಲಿ ವಿನಂತಿಸಿದ್ದಾರೆ.