ಲಕ್ಷ್ಮೇಶ್ವರ: ಉತ್ತಮ ರಸ್ತೆ ನಿರ್ಮಾಣಕ್ಕೆಂದು ಸರಕಾರ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತೇ. ಆದ್ರೆ, ಗುತ್ತಿಗೆದಾರರು ಆ ಅನುದಾನ ಬಳಸಿಕೊಂಡು ಕಳಪೆ ಕಾಮಗಾರಿ ಮಾಡಿ, ಜನರಿಗೂ ಹಾಗೂ ಸರಕಾರಕ್ಕೆ ಮಕ್ಮಲ್ ಟೋಪಿ ಹಾಕ್ತಾರೆ ಎನ್ನುವದಕ್ಕೆ ಇದೊಂದು ಬೆಸ್ಟ್ ಉದಾಹರಣೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರ ತಾಂಡಾದಿಂದ ಎಂ.ಡಿ.ಆರ್ ವ್ಹಾಯಾ ಸೂವರ್ಣಗಿರಿತಾಂಡಾ ಮತ್ತು ಸೂರಣಗಿವರೆಗೆ ರಸ್ತೆ ಕಾಮಾಗಾರಿಯುವ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದರು.
ಹೌದು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-3 ಯೋಜನೆಯಡಿಯಲ್ಲಿ ಸುಮಾರು 6.72 ಕೋಟಿ ರೂಪಾಯಿ ವೆಚ್ಚದಲ್ಲಿ 9.18 ಕಿ.ಮೀ ರಸ್ತೆ ಕಾಮಗಾರಿ ಮಂಜೂರು ಆಗಿತ್ತು ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರರು 2020ರಲ್ಲಿಯೇ ಪ್ರಾರಂಬಿಸಿದ್ದಾರೆ ಆದರೆ ಇಲ್ಲಿಯವರೆಗೆ ಕಾಮಗಾರಿ ಯುಕ್ತಾಯವಾಗಿಲ್ಲ. ಆದೇಶ ಪ್ರಕಾರ 2021 ರ 6 ನೇ ತಿಂಗಳಲ್ಲಿ ಮುಕ್ತಾಯವಾಗಬೇಕಿದ್ದ ಕಾಮಗಾರಿ ಇಲ್ಲಿಯವರೆಗು ಮುಕ್ತಾವಾಗದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಕಳಪೆ ಕಾಮಗಾರಿಯಾಗಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಅಂತಾ ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ಮೇಟಲಿಂಗ್ ಮಾಡಿ ಅರ್ಧಕ್ಕೆ ನಿಲ್ಲಿಸಿ 6 ತಿಂಗಳ ಕಳೆದಿದೆ .. ರಸ್ತೆಗೆ ಹಚ್ಚಿ ಸುಮಾರು ಹೋಲಗಳು ಇವೆ . ಕಾಮಗಾರಿಯ ರಸ್ತೆಯಲ್ಲಿನ ಧೂಳು ಬೆಳೆಗಳ ಮೇಲೆ ಬಂದು ಬೆಳೆಗಳಿಗೆ ರೋಗ ಬಂದು ಬೆಳೆಗಳು ನಾಶವಾಗುತ್ತಿವೆ. ಈ ರಸ್ತೆ ಕಾಮಗಾರಿಯ ಗುತ್ತಿಗೆದಾರರು, ಸಂಭವಿಸಿದ ಅಧಿಕಾರಿಗಳು ಎಲ್ಲಿ ಇದ್ದಾರೆ ಎಂದು ಅರ್ಥ ಆಗುತ್ತಿಲ್ಲ. ಅದಷ್ಟು ಬೇಗ ಈ ರಸ್ತೆ ಪೂರ್ಣಗೊಳ್ಳದಿದ್ದರೆ ರೈತರಿಂದ ಹೋರಾಟ ಮಾಡಲಾಗುದು ಎಂದು ವಿನೋದ ಲಮಾಣಿ, ದೊಡ್ಡೂರ ತಾಂಡಾದ ರೈತ ಎಚ್ಚರಿಸಿದರು