ಲಕ್ಷ್ಮೇಶ್ವರ:
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾನವ ಹಕ್ಕುಗಳು ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆ ರಾಜ್ಯ ಆರೋಗ್ಯ ಘಟಕ ಕಾರ್ಯದರ್ಶಿ ಹಾಗೂ ಜಿಲ್ಲಾ ಸಂಯೋಜಕ ನಿರಂಜನ ವಾಲಿ ನೇತೃತ್ವದಲ್ಲಿ ಲಕ್ಷ್ಮೇಶ್ವರ ತಾಲೂಕ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆ ಅಧ್ಯಕ್ಷ ರಾಗಿ ಸೋಮಣ್ಣ ಬೆಟಗೇರಿ ನೇಮಕಗೊಂಡರು ಇನ್ನುಳಿದಂತೆ ಉಪಾಧ್ಯಕ್ಷ ರಾಗಿ ಪದ್ಮರಾಜ ಪಾಟೀಲ್, ಪ್ರದಾನ ಕಾರ್ಯದರ್ಶಿ ವೀರೇಂದ್ರ ಕಾಳಮ್ಮನವರ, ಸಹ ಕಾರ್ಯದರ್ಶಿ ಶಿವಲಿಂಗಯ್ಯ ಹೋತಗಿಮಠ ಸಂಘಟನೆ ಕಾರ್ಯದರ್ಶಿ ದಾದಾಪೀರ ನದಾಫ, ಜಗದೀಶ ಇಳಗೇರ, ಖಜಾಂಚಿ ಆಗಿ ಮಲ್ಲನಗೌಡ ಪಾಟೀಲ ನೇಮಕ ಗೊಂಡರು
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಸೋಮಣ್ಣ ಬೆಟಗೇರಿ ತಾಲೂಕಿನ ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆದರೆ ನಮ್ಮ ಸಂಸ್ಥೆಯಿಂದ ಅದರ ಸಲುವಾಗಿ ಹೋರಾಟ ಮಾಡುತ್ತೇವೆ ಮಾನವ ಹಕ್ಕು ಉಲ್ಲಂಘನೆ ಆಗದೆ ಇರುವ ಹಾಗೆ ಜನರೊಂದಿಗೆ ಬೆರೆತು ಕೆಲಸಮಾಡುತ್ತೇವೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಸದಸ್ಯರಾದ ಮಲ್ಲಿಕಾರ್ಜುನ ಸೂರಣಗಿ, ಶೇಕಣ್ಣ ಕಾಳೆ, ಅಣ್ಣಪ್ಪ ರಾಮಗೇರಿ, ಶಿವು ಮಣ್ಣೂರ, ಮುದಕಣ್ಣ ಗದ್ದಿ ಉಪಸ್ಥಿತರಿದ್ದರು