
ಉತ್ತರಪ್ರಭ ಸುದ್ದಿ
ಗದಗ: ತಾಲ್ಲೂಕಿನ ಪಾಪನಾಸಿ ತಾಂಡಾದ ಯುವತಿ ತನ್ನ ತಂದೆಯನ್ನು ಪಂಡರಾಪುರಕ್ಕೆ ಕಳಿಸಲು ದ್ವಿಚಕ್ರ ವಾಹನದಿಂದ ಗದುಗಿನ ರೈಲ್ವೆ ನಿಲ್ದಾಣಕ್ಕೆ ಬಿಟ್ಟು ಮರಳಿ ತನ್ನ ಊರಿಗೆ ಬರುವ ಮಾರ್ಗ ಮದ್ಯದಲ್ಲಿ ಅಡವಿಸೋಮಾಪುರದ ಮಲ್ಲಿಕಾರ್ಜುನ ಮಠದ ಹತ್ತಿರ ರಬಸವಾಗಿ ಬಂದ ವಾಹನ ಡಿಕ್ಕಿ ಹೊಡೆದು ಯುವತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾತ್ರಿ 10 ಘಂಟೆ ಸುಮಾರಿಗೆ ನಡೆದಿದೆ. ವಾಹನ ಸವಾರ ವಾಹನ ಸಮೆತ ಪರಾರಿಯಾಗಿದ್ದಾನೆ, ತದನಂತರ ಪಾಪನಾಸಿ ಟೊಲ್ ಗೆಟಿನಲ್ಲಿ ಅಲ್ಲಿನ ಸ್ಥಳಿಯರು ತಪಾಸಣೆ ಮಾಡಿದಾಗ ಸಿಸಿ ಟಿವಿ ದೃಶದಲ್ಲಿ ಗುರುತಿಸಿದಂತೆ ವಾಹನ ಸಂಖೇ KA 01 C 3095 ಎಂದು ಅಲ್ಲಿನ ಸ್ಥಳಿಯರಿಂದ ತಿಳಿದುಬಂದಿದೆ, ವಾಹನ ಚಾಲಕನ ಪತ್ತೆಯಾಗಿಲ್ಲ.

ಮೃತ ದುರ್ದೈವಿ ಶಿಲ್ಪಾ ಸೋಮನಾಥ ಕಾರಭಾರಿ (26) ಸಾ|| ಪಾಪನಾಶಿ ತಾಂಡಾ ಎಂದು ಗುರುತಿಸಲಾಗಿದ್ದು. ಗದಗ ಗ್ರಾಮೀಣ ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.