ಬೆಂಗಳೂರು: ಈ ವರ್ಷ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅದರ ಸ್ಮರಣೆಗಾಗಿ ರಾಜ್ಯದ 10 ಸಂಘ ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿ ಈ ವರ್ಷಕ್ಕೆ ಮಾತ್ರ ಸೀಮಿತವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಶ್ರೀವಿರೇಶ್ವರ ಪುಣ್ಯಾಶ್ರಮ ಅಂಧ ಮಕ್ಕಳ ಶಾಲೆ ಗದಗ, ಕರ್ನಾಟಕ ಹಿಮೋ ಫಿಲಿಯಾ ಸೊಸೈಟಿ,ದಾವಣಗೇರಿ,ಶ್ರೀ ಕೊತ್ತಲ ಬಸವೆಶ್ವರ ಭಾರತೀಯ ಶಿಕ್ಷಣ ಸಮಿತಿ ಕುಬುರಗಿ, ಶ್ರೀ ರಾಮಕೃಷ್ಣಾಶ್ರಮ ಮಂಗಳೂರು ದಕ್ಷಿಣಕನ್ನಡ , ಆಲ್ ಇಂಡಿಯಾ ಜೈನ್ ಯುತ್ ಫೇಡರೇಶನ್ ಹುಬ್ಬಳ್ಳಿ, ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ, ಉತ್ಸವ್ ರಾಕ್ ಗಾರ್ಡನ್ ಹಾವೇರಿ, ಅದಮ್ಯ ಚೇತನ ಬೆಂಗಳೂರು, ಸ್ಟೇಪ್ ಒನ್ ಬೆಂಗಳೂರು, ಬನಶಂಕರಿ ಮಹಿಳಾ ಸಮಾಜ ಬೆಂಗಳೂರು ಸೇರಿದಂತೆ 10 ಸಂಘ ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿಯನ್ನು ನೀಡಲಾಗಿದೆ.