ಗದಗ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಸಹಯೋಗದಲ್ಲಿ ಮಾ.11 ರಿಂದ 13ರ ವರೆಗೆ ಸಂಜೆ 4 ರಿಂದ ರಾತ್ರಿ 10ರ ವರೆಗೆ ನಗರದ ಮುನ್ಸಿಪಲ್ ಪದವಿ ಪೂರ್ವ ಕಾಲೇಜ ಮೈದಾನದಲ್ಲಿ ದಿನಗಳಲ್ಲಿ ವಿಶ್ವದಲ್ಲಿ ಅವತರಿಸಿದ ವಿಶ್ವೇಶ್ವರನ ದರ್ಶನ, ಸಹಸ್ರಲಿಂಗ ದರ್ಶನ ಮತ್ತು ದ್ವಾದಶ ಜ್ಯೋತಿರ್ಲಿಂಗ ದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬ್ರಹ್ಮಕುಮಾರಿ ಬಿ.ಕೆ.ಜಯಂತಿಅಕ್ಕ ಹೇಳಿದರು.

ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,

ಅಂದು ಸಂಜೆ 6ಕ್ಕೆ ಮಹಾಶಿವರಾತ್ರಿ ಮಹೋತ್ಸವದ ಉದ್ಘಾಟನೆ ನಡೆಯಲಿದ್ದು, ಜಿಲ್ಲೆಯ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ನೆರವೇರಿಸಲಿದ್ದಾರೆ. ಸಹಸ್ರಲಿಂಗ ದರ್ಶನವನ್ನು ಜಿ.ಪಂ ಸಿಇಒ ಭರತ್‌ ಎಸ್, ಜಿಲ್ಲಾ ಪೊಲೀಸ್‌ ಅಧೀಕ್ಷಕ ಯತೀಶ.ಎನ್ ಉದ್ಘಾಟಿಸಲಿದ್ದಾರೆ.

ತಹಶೀಲ್ದಾರರು ಶ್ರೀನಿವಾಸಮೂರ್ತಿ ಕುಲಕರ್ಣಿ, ನಗರ ಸಭೆಯ ಪೌರಾಯುಕ್ತ ರಮೇಶ ಪಾಂಡುರಂಗ ಜಾಧವ, ಪ್ರಾಚಾರ್ಯ ಎಸ್.ಎಸ್.ಕುಲಕರ್ಣಿ ಪಾಲ್ಗೊಳ್ಳಲಿದ್ದಾರೆ.

ಅಭಿನವ ನೃತ್ಯ ಅಕಾಡೆಮಿಯ ಯಶೋಧಾರಾವ್‌ ಅವರಿಂದ ಕತಕ್ ನೃತ್ಯ ಹಾಗೂ ಕಲಾವಿದ ಮಕ್ಕಳಿಂದ ಜಾನಪದ ನೃತ್ಯ ಮತ್ತು ಮಹಾ ಶಿವರಾತ್ರಿ ಪ್ರಯುಕ್ತ ಗುರುವಾರ ಬೆಳಗ್ಗೆ 21 ಜ್ಯೋತಿರ್ಲಿಂಗಗಳ ಮೆರವಣಿಗೆಯ ಹಮ್ಮಿಕೊಳ್ಳಲಾಗಿದೆ. ಸಹೋದರ-ಸೋದರಿಯರು ಸದ್ಭಾವನಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಕನ್ನಡ ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಹಿರೇಮಠ ಸದ್ಭಾವನಾ ಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಮಾ.12 ರಂದು ಸಂಜೆ 6ಕ್ಕೆ ಮಹಿಳಾ ಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸವಿತಾ ಶಿಗ್ಲಿ, ಪಬ್ಲಿಕ್ ಪ್ರಾಸಿಕ್ಯೂಟರ್,ರೋಟರಿ ಕ್ಲಬ್‌ ಅಧ್ಯಕ್ಷೆ ಡಾ.ರಾಧಿಕಾ ಕುಲಕರ್ಣಿ, ಇನ್ನರ್‌ ವ್ಹೀಲ್‌ ಕ್ಲಬ್ ಹಾಗೂ ಅಕ್ಕಮಹಾದೇವಿ ಯೋಗ ವಿಜ್ಞಾನಕೇಂದ್ರ ಭಾಗ-1 ಅಧ್ಯಕ್ಷೆ ಸುಮಾ.ಎಸ್.ಪಾಟೀಲ, ಅಕ್ಕನ ಬಳಗದ ಅಧ್ಯಕ್ಷೆ ಸುಜಾತಾ ಮಾನ್ವಿ, ಸಮಾಜ ಕಾರ್ಯಕರ್ತೆ ಸುಮಿತ್ರಾ ಪಾಟೀಲ, ಅಕ್ಕಮಹಾದೇವಿ ಯೋಗ ವಿಜ್ಞಾನಕೇಂದ್ರ ಅನ್ನಪೂರ್ಣ.ಎಸ್.ವರವಿ, ಜ್ಯೋತಿಶ್ರೀ, ಗಾಯತ್ರೀ ರಂಗಣ್ಣವರ್ ಮುಂತಾದವರು ಉಪಸ್ಥಿತರಿರುವರು.

ಕಾರ್ಯಕ್ರಮದ ಪ್ರಾರಂಭದಲ್ಲಿ 6 ರಿಂದ 6.30 ರವರೆಗೆ ಜ್ಯೋತಿಶ್ರೀ ತಂಡದವರಿಂದ ಶಿವನ ಮಹಿಮಾ ನೃತ್ಯ ಪ್ರದರ್ಶನವಾಗಲಿದೆ. ಮಾ.13 ರಂದುಸಂಜೆ 6ಕ್ಕೆ ರಾಷ್ಟಿಯ ಭಾವೈಕ್ಯತಾ ಮಹೋತ್ಸವಕ್ಕೆ ಶಾಸಕ ಎಚ್.ಕೆ.ಪಾಟೀಲ ಆಗಮಿಸಲಿದ್ದಾರೆ.

ಸರ್ವಧರ್ಮದ ಪ್ರತಿನಿಧಿಗಳಾಗಿ ಧಾರವಾಡದ ವಿದ್ವಾನ್ ವಾಚಸ್ಪತಿ ಶಾಸ್ತಿಗಳು, ಹುಲಕೋಟಿ ಗ್ರಾ.ಪಂ ಮಾಜಿ ಅಧ್ಯಕ್ಷ ಹಸೀಮ್‌ ಸಾಬ ತಹಸೀಲ್ದಾರ್, ಪಿ ಫೆಡ್ಲಿಸ್ ಸೇರಿದಂತೆ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ನಟವರಿ ಕಲಾ ತಂಡದವರಿಂದ ಭಾವೈಕ್ಯತಾ ಸಂದೇಶ ನೀಡುವಜ್ಞಾನ ನೃತ್ಯ ಜರುಗಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಬ್ರಹ್ಮಕುಮಾರಿ ರೇಖಾ, ಸಾವಿತ್ರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಕೋಳಿಗೆ ಡಿಸೆಂಟ್ರಿಯಂತೆ..! ಕಾರಣ ಹೇಳಿ ಹೊರಬಂದ ವ್ಯಕ್ತಿಯ ಮಾತು ಕೇಳಿ..!

ಗದಗ: ಕೋಳಿಗೆ ಭೇದಿ, ಆಸ್ಪತ್ರೆಗೆ ಕರೆದುಕೊಂಡು ಹೋಗ್ತಿದ್ದೇನೆ. ಹೀಗಂತ ಕಾರಣ ನೀಡಿದ ವ್ಯಕ್ತಿ ಮಾತಿಗೆ ಪೊಲೀಸರೆ ಸುಸ್ತಾದರು. ಲಾಕ್ ಡೌನ್ ಹಿನ್ನೆಲೆ ಅನಾವಶ್ಯಕ ಓಡಾಟಕ್ಕೆ ಬ್ರೇಕ್ ಬಿದ್ದಿದೆ.

ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ: ಜ.28 ರಂದು ಮಸ್ಕಿಯಲ್ಲಿ ಪ್ರತಿಭಟನೆ.

ವರದಿ: ವಿಠಲ ಕೆಳೂತ್ ಮಸ್ಕಿ: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಭಾವಚಿತ್ರಕ್ಕೆ ಅಪಮಾನ…

ವರುಣನ ಆರ್ಭಟ – ಸಂತ್ರಸ್ಥರಿಗೆ ಪರಿಹಾರ ಘೋಷಿಸಿದ ಸರ್ಕಾರ!

ಪ್ರವಾಹ ಸಂತ್ರಸ್ಥರಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿಪರೀತ ಮಳೆಯಾಗುತ್ತಿದೆ. ಅದರಲ್ಲಿಯೂ ಉತ್ತರ ಕರ್ನಾಟಕ ಭಾಗದಲ್ಲಿ ಮಳೆರಾಯನ ಅವಾಂತರ ಜೋರಾಗಿದೆ.

ಸೂರ್ಯಕಾಂತಿಗೆ ಕೋರಿ ಹುಳಗಳ ದಾಳಿ-ರೈತರು ಕಂಗಾಲು

ಉತ್ತರಪ್ರಭ ಸುದ್ದಿಆಲಮಟ್ಟಿ: ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೊಂಡಿರುವ ಸೂರ್ಯಕಾಂತಿ ಬೆಳೆ ಹುಲುಸಾಗಿ ಬೆಳೆದು ನಿಂತಿದೆ. ಹಚ್ಚು ಹಸಿರಾಗಿ…