ಮುಳಗುಂದ : ಪಟ್ಟಣ ಪಂಚಾಯ್ತಿ 2020-21ನೇ ಸಾಲಿನ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಕೋರಮ್ಮನ ಗುಡಿ ಹತ್ತಿರದ ಆಶ್ರಯ ಬಡಾವಣೆಯಲ್ಲಿ 16.10ಲಕ್ಷ ರೂ ವೆಚ್ಚದಲ್ಲಿ ಉದ್ಯಾನವನ ನಿರ್ಮಾಣ,ಶಿದ್ದೇಶ್ವರ ನಗರದಲ್ಲಿ ಹಾಗೂ ಅಂಬೇಡ್ಕರ್ ನಗರದಲ್ಲಿ ಫೇವರಸ್ ಜೋಡಣೆ ಕಾಮಗಾರಿಗೆ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹೊನ್ನಪ್ಪ ವಡ್ಡರ ಶನಿವಾರ ಭೂಮಿ ಪೂಜೆ ನೆರವೇರಿಸಿದರು.
ನಂತರ ಹರಣಶೀಕಾರಿ ಕಾಲೂನಿ ಮಾದರಿ ಶೌಚಾಲಯ ಹಾಗೂ ಬಯಲು ಬಸವೇಶ್ವರ ನಗರದಲ್ಲಿನ ನಿಮರ್ಮಿಸಿದ ಸಾರ್ವಜನಿಕ ಸುಲಭ ಶೌಚಾಲಯಗಳನ್ನ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗದಗ ಎ.ಪಿ.ಎಂ.ಸಿ. ಅಧ್ಯಕ್ಷ ಸಿ.ಬಿ ಬಡ್ನಿ, ಪ.ಪಂ ಸದಸ್ಯರಾದ ಕೆ.ಎಲ್ ಕರಿಗೌಡರ, ಮಹಾದೇವಪ್ಪ ಗಡಾದ, ಮಾಂತಪ್ಪ ನೀಲಗುಂದ, ಎನ್.ಆರ್ ದೇಶಪಾಂಡೆ, ಷಣ್ಮುಖಪ್ಪ ಬಡ್ನಿ, ಬಸವರಾಜ ಹಾರೋಗೇರಿ, ಪಾರವ್ವ ಅಳಣ್ಣವರ, ನೀಲವ್ವ ಅಸುಂಡಿ, ಮಲ್ಲವ್ವ ಕುಂದಗೋಳ, ಬಸವರಾಜ ಹೊರಪೇಟಿ, ಶಂಭು ಚವ್ಹಾಣ, ಮಂಜುನಾಥ ಹಾಗೂ ಮೊದಲಾದವರು ಇದ್ದರು.