ಧಾರವಾಡ: ನಗರದ ಜನತಾ ಶಿಕ್ಷಣ ಸಮಿತಿಯ ಬನಶಂಕರಿ ಆರ್ಟ್ಸ್, ಕಾಮರ್ಸ್ ಮತ್ತು ಎಸ್.ಕೆ.ಗುಬ್ಬಿ ವಿಜ್ಞಾನ ಮಹಾವಿದ್ಯಾಲಯ ಹಾಗೂ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಒಂದು ದಿನದ ಆಧುನಿಕ ಭಾರತದಲ್ಲಿ ಲಿಂಗ ತಾರತಮ್ಯ ಕುರಿತು ರಾಷ್ಟ್ರ ಮಟ್ಟದ ವೆಬಿನಾರ ಆಯೋಜಿಸಲಾಗಿದೆ.
ಜ.9 ರಂದು ಬೆಳಿಗ್ಗೆ 10 ಗಂಟೆಗೆ ವೆಬಿನಾರ್ ಆರಂಭವಾಗಲಿದೆ. ಧಾರವಾಡ ಕವಿವಿ ಸಮಾಜ ಶಾಸ್ತ್ರ ವಿಭಾಗದ ಪ್ರಾದ್ಯಾಪಕಿ ಮತ್ತು ಮಹಿಳಾ ಅದ್ಯಯನ ಸಂಶೋಧನ ಕೇಂದ್ರದ ನಿರ್ದೇಶಕಿ ಡಾ.ಶಕುಂತಲಾ ಸಿದ್ರಾಮಶೆಟ್ಟರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಉಚಿತ ನೋಂದಣಿಗೆ ಅವಕಾಶವಿದ್ದು, ಗೂಗಲ್ ಮೀಟ್ https://cutt.ly/hjaL1CK ಲಿಂಕನ್ನು ಒತ್ತಿ ವೆಬಿನಾರ್ ನಲ್ಲಿ ಭಾಗಿಯಾಗಲು ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಭಿವೃದ್ಧಿ ಅಧಿಕಾರಿ ಡಾ.ಸುರಜ್ ಜೈನ್, ಹಣಕಾಸು ಅಧಿಕಾರಿ ಡಾ.ಅಜಿತ್ ಪ್ರಸಾದ್, ಕಾರ್ಯದರ್ಶಿ ಡಾ.ಎನ್.ವಜ್ರಕುಮಾರ್, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವೆಂಕಟೇಶ್ ಮುತಾಲಿಕ್, ಪ್ರಾಚಾರ್ಯ ಡಾ.ಜಿ.ಕೃಷ್ಣಮೂರ್ತಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಸಂಯೋಜಕ ಡಾ.ಶೌಕತ್ ಅಲಿ ಮೇಗಲಮನಿ ವೆಬಿನಾರ್ ನಲ್ಲಿ ಭಾಗವಹಿಸುವವರನ್ನು ಸ್ವಾಗತಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ತನುಜಾ ರೋಖಡೆ ಮೊ. 8792740060 ಹಾಗೂ ಪ್ರಶಾಂತ ಯಡ್ರಾಮಿಮಠ 89513 33220 ಅವರನ್ನು ಸಂಪರ್ಕಿಸಲು ಕೋರಲಾಗಿದೆ.