ಗದಗ: ಬೆಟಗೇರಿ ಶಾಖೆಯಲ್ಲಿ ಜುಲೈ 07 ರಂದು 11 ಕೆ.ವ್ಹಿ. ಮಾರ್ಗದ ತುರ್ತು ನಿರ್ವಹಣಾ ಕೆಲಸ ಹಮ್ಮಿಕೊಳ್ಳಲಾಗಿದ್ದು, ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಈ ಭಾಗದ ಎಸ್.ಎಂ.ಕೃಷ್ಣ ನಗರ ಹಾಗೂ ಬಣ್ಣದ ನಗರ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸಂಬಂಧಿಸಿದ ಸಾರ್ವಜನಿಕರು ಮತ್ತು ಗ್ರಾಹಕರು ಸಹಕರಿಸಲು ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ಶಹರ ಉಪ ವಿಭಾಗ ಹೆಸ್ಕಾಂ ಗದಗ ಇವರು ತಿಳಿಸಿದ್ದಾರೆ.