ಹೊಸದೆಹಲಿ: ಕೊರೊನಾ ಯೋಧರಿಗೂ ಸೋಂಕು ತಗುಲುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ದೇಶಾದ್ಯಂತ ಇಲ್ಲಿಯವರೆಗೂ 548 ವೈದ್ಯರು, ದಾದಿಯರಿಗೆ ಕೊರೊನಾ ತಗುಲಿದ್ದು, ಅವರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ದೆಹಲಿಯಲ್ಲಿ 69 ವೈದ್ಯರಿಗೆ ಹಾಗೂ 274 ದಾದಿಯರಿಗೆ ಕೊರೊನಾ ವೈರಸ್‌ ಅಂಟಿದೆ. ವೈದ್ಯರು ಮತ್ತು ದಾದಿಯರಿಗೆ ಸೋಂಕಿತರ ಚಿಕಿತ್ಸೆ ವೇಳೆ ಸೋಂಕು ತಗುಲಿದೆಯೇ ಅಥವಾ ಸಮುದಾಯದಿಂದ ವೈರಸ್‌ ಅಂಟಿದೆಯೋ ಎಂಬುವುದನ್ನು ಸರ್ಕಾರ ಇದುವರೆಗೂ ಸ್ಪಷ್ಟಪಡಿಸಿಲ್ಲ. ನಾಲ್ಕು ತಿಂಗಳಿಗೂ ಹಿಂದೆ ಕೇರಳದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾದ ಬಳಿಕ ಇದೀಗ ದೇಶದಲ್ಲಿ ಸೋಂಕಿತರ ಸಂಖ್ಯೆ 50 ಸಾವಿರದ ಗಡಿ ದಾಟಿದೆ. 1650 ಜನರು  ಬಲಿಯಾಗಿದ್ದಾರೆ.

ಇನ್ನೊಂದು ಆತಂಕಕಾರಿ ಸಂಗತಿ ಎಂದರೆ ಕಳೆದ ಮೂರು ದಿನಗಳಲ್ಲಿಯೇ 10 ಸಾವಿರ ಜನರಿಗೆ ಸೋಂಕು ತಗುಲಿದೆ. ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಕೈ ಮೀರಿದ್ದು, ಒಂದೇ ದಿನ 1,233 ಪ್ರಕರಣಗಳು ವರದಿಯಾಗಿವೆ. ಅಲ್ಲಿ ಸೋಂಕಿತರ ಸಂಖ್ಯೆ 1,6750ರ ಗಡಿ ದಾಟಿದೆ.

Leave a Reply

Your email address will not be published. Required fields are marked *

You May Also Like

ರಾಜಸ್ತಾನ್ ರಾಜಕೀಯ: ಕ್ಲೈಮಾಕ್ಸ್ ಗೆ ಕ್ಷಣಗಣನೆ:ಡಿಸಿಎಂ, ರಾಜ್ಯಾಧ್ಯಕ್ಷ ಹುದ್ದೆಯಿಂದ ಪೈಲಟ್ ಡ್ರಾಪ್

ಎರಡನೆ ಶಾಸಕಾಂಗೀಯ ಪಕ್ಷದ ಸಭೆಗೂ ಗೈರು ಹಾಜರಾದ ಸಚಿನ್ ಪೈಲಟ್ ಅವರನ್ನು ಡಿಸಿಎಂ ಮತ್ತು ಪಕ್ಷದ…

ಮದ್ಯ ಮಾರಾಟ ನಿಷೇಧಕ್ಕೆ ಗೋರ್ ಸೇನಾ ಒತ್ತಾಯ

ಮದ್ಯೆ ಮಾರಾಟ ಸಂಪೂರ್ಣವಾಗಿ ನಿಶೇಧಿಸುವಂತೆ ಒತ್ತಾಯಿಸಿ ಗೋರ್ ಸೇನಾ ಸಂಘಟನೆಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಎಸ್ಸೆಸ್ಸೆಲ್ಸಿ ಪರೀಕ್ಷೆಯ ನಿರ್ಧಾರದಿಂದ ಸರ್ಕಾರ ತಕ್ಷಣವೇ ಹಿಂದೆ ಸರಿಯಬೇಕು – ಕುಮಾರಸ್ವಾಮಿ!

ಬೆಂಗಳೂರು: ರಾಜ್ಯದಾದ್ಯಂತ ಜೂ. 25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರ ಈ ನಿರ್ಧಾರದಿಂದ…