ಗದಗ: ಕೊರೋನಾ ಸಂಕಷ್ಟ ಕಾಲದಲ್ಲಿ ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ನಾವು ಎಷ್ಟೆ ಹೇಳಿದರೂ ಜನರು ಜಾಗೃತರಾಗುತ್ತಿಲ್ಲ. ಬಹುತೇಕ ಹಳ್ಳಿಗಳಲ್ಲಿ ಜನರು ಮುಖಕ್ಕೆ ಮಾಸ್ಕ್ ಹಾಕುತ್ತಿಲ್ಲ. ಹಣ ಕೊಟ್ಟೆ ಮಾಸ್ಕ್ ಖರೀದಿಸಿ ಹಾಕಿಕೊಳ್ಳಬೇಕೆಂದಿಲ್ಲ. ನಾನು ನನ್ನ ಧೋತರ ಹರಿದು ಮಾಸ್ಕ್ ಮಾಡಿಕೊಂಡಿದ್ದೇನೆ. ಇವುಗಳನ್ನೆ ನಮ್ಮ ಹೊಲದಲ್ಲಿ ಕೆಲಸ ಮಡುವ ಕಾರ್ಮಿಕರಿಗೂ ನೀಡಿದ್ದೇನೆ ಎಂದು ಮಾಜಿ ಸಚಿವ ಎಸ್.ಎಸ್.ಪಾಟೀಲ್ ತಾವು ತಯಾರಿಸಿದ ಮಾಸ್ಕ್ ಪ್ರದರ್ಶಿಸಿದರು.
ಯಾವ ಸರ್ಕಾರ ಬಂದ್ರು ಸಾರಾಯಿ ಬಂದ್ ಮಾಡಲ್ಲ. ಈ ನಿಟ್ಟಿನಲ್ಲಿ ಜನರೇ ತಯಾರಬೇಕು. ಸರ್ಕಾರಕ್ಕೆ ಸಾರಾಯಿ ಮಾರಾಟದಿಂದ ಲಾಭ ಇದ್ದಾಗ ಸರ್ಕಾರ ಯಾಕೆ ಸಾರಾಯಿ ಬಂದ್ ಮಾಡುತ್ತದೆ. ಸಾರಾಯಿ ಮಾರಾಟದ ಹೊಣೆ ಎಲ್ಲ ಪಕ್ಷದವರು ಹೊರಬೇಕಾಗಿದೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದಾಗಲೂ ಇದನ್ನು ಬಂದ್ ಮಾಡಲು ಆಗಿಲ್ಲ. ಈ ಬಗ್ಗೆ ಧ್ವನಿ ಎತ್ತಿದರೆ ನಮ್ಮ ಮದ್ಯೆ ಇರುವವರೆ ವಿರೋಧ ವ್ಯಕ್ತ ಪಡಿಸಿ ನಮ್ಮನ್ನು ಸುಮ್ಮನಾಗಿಸಿ ಬಿಡುತ್ತಿದ್ದರು. ಇದರ ಹೊಣೆ ನಾವೆಲ್ಲರೂ ಹೊರಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.