ಮೆಕ್ಕೆಜೋಳದ ಬೆಳೆಗೆ ಬೆಂಕಿ ಇಟ್ಟ ಕಿಡಗೇಡಿಳು

ಲ್ಲೂಕಿನ ಕುಂಟೋಜಿ ಗ್ರಾಮದ ಗುಡ್ಡದ ಮೇಲಿನ ಹೊಲದಲ್ಲಿ ಬೆಳೆಯಲಾಗಿದ್ದ ಮೆಕ್ಕೆಜೋಳದ ಬೆಳೆಗೆ ಕಿಡಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಕಟಾವಿಗೆ ಬಂದಿದ್ದ ಫಸಲು ಹೊಲ್ಲದಲ್ಲೇ ಸುಟ್ಟು ಕರಕಲಾಗಿದೆ. ಸಾಲಾ ಮಾಡಿ ಕೃಷಿ ಮಾಡಿದ್ದ ಗಜೇಂದ್ರಗಡ ಪಟ್ಟಣದ ಲಂಬಾಣಿ ತಾಂಡಾದ ರೈತ ಮಹಿಳೆ ಲಕ್ಷ್ಮವ್ವ ಉಮಲಪ್ಪ ರಾಠೋಡ ಕೈಗೆ ಬಂದ ಜೋಳ ಸುಟ್ಟು ಬೂದಿಯಾದ ಕಾರಣ ಕಣ್ಣೀರು ಇಡುತ್ತಾ ಕಿಡಗೇಡಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾಳೆ.