ಗಜೇಂದ್ರಗಡ: ಮನೆ ಮೇಲೆ ಹತ್ತಲು ನಿಚ್ಚಣಕಿ ಇಡಲು ಹೋದಾಗ ನಿಚ್ಚಣಿಕೆಗೆ ವಿದ್ಯುತ್ ತಂತಿ ತಗುಲಿ ವಿದ್ಯುತ್ ಸ್ಪರ್ಶಗೊಂಡ ಪರಿಣಾಮ ಯುವಕನೊಬ್ಬ ಮೃತಪಟ್ಟ ಘಟನೆ ಸಮೀಪದ ಲಕ್ಕಲಕಟ್ಟಿ ಗ್ರಾಮದಲ್ಲಿ ನಡೆದಿದೆ.
ಲಕ್ಕಲಕಟ್ಟಿ ಗ್ರಾಮದ ಶರಣಬಸವಪ್ಪ ಸಂಗಪ್ಪ ಬೆನಕನವಾರಿ (24) ಮೃತ ದುರ್ಧೈವಿ. ಇದ್ದ ಒಬ್ಬ ಮನನನ್ನು ಕಳೆದುಕೊಂಡ ಕುಟುಂಬ ಶೋಕಸಾಗರದಲ್ಲಿ ಮುಳಗಿದ್ದು, ಮೃತನ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.