ನೇತ್ರದಾನ: ಸಾವಿನಲ್ಲಿ ಸಾರ್ಥಕತೆ ಮೆರೆದ ಚಂದ್ರಗೌಡ ಪಾಟೀಲ

ಉತ್ತರಪ್ರಭ
ಗದಗ: ನಗರದ ಖ್ಯಾತ ವಕೀಲರಾದ ಬಿ ಸಿ ಪಾಟೀಲರವರ ತಂದೆಯವರಾದ ಚಂದ್ರಗೌಡ ಪಾಟೀಲ (87)ಇಂದು ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದು. ಸಾವಿನ ನಂತರವು ಬೆರೆಯವರಿಗೆ ಬೆಳಕಾಗಲಿ ಎಂದು ಅವರ ಕುಟುಂಬಸ್ಥರು ಅವರ ಕಣ್ಣುಗಳನ್ನು ದಾನ ಮಾಡುವ ನಿರ್ಧಾರವನ್ನು ತೆಗೆದುಕೊಂಡು ಹುಬ್ಬಳ್ಳಿಯ ಜೋಷಿ ಕಣ್ಣಿನ ಆಸ್ಪತ್ರೆ ಮಾಹಿತಿ ತಿಳಿಸಿ ನಂತರ ಹುಬ್ಬಳ್ಳಿಯ ಜೋಷಿ ಆಸ್ಪತ್ರೆಯ ಸಿಬ್ಬಂದಿಯವರು ಬಂದು ಕಣ್ಣುಗಳನ್ನು ಕಾನೂನಿನ ಪ್ರಕಾರ ದಾನ ತೆಗೆದುಕೊಂಡಿದ್ದಾರೆ. ಚಂದ್ರ ಗೌಡ ಪಾಟೀಲರು ಮೊದಲಿನಿಂದಲೂ ಸಾಮಾಜಿಕ ಕಳಕಳಿ ಉಳ್ಳ ವರು. ನೇತ್ರ ದಾನ ಮಾಡುವ ಮೂಲಕ ಸಾವಿನಲ್ಲಿ ಸಾರ್ಥಕತೆಯನ್ನು ಮೆರೆದಿದ್ದಾರೆ. ಅವರಿಗೆ ಒರ್ವ ಪುತ್ರ, ನಾಲ್ಕು ಜನ ಪುತ್ರಿಯರು, ಮೊಮ್ಮಕ್ಕಳು ಮತ್ತು ಅಪಾರ ಬಂದುಬಳಗವನ್ನು ಬಿಟ್ಟು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ದಿನಾಂಕ: 11.04.2022 ಸಮಯ: ಮುಂಜಾನೆ ೧೧ಘಂಟೆಗೆ ವೀರಶೈವ ಲಿಂಗಾಯಿತ ರುದ್ರಭೂಮಿಯಲ್ಲಿ ನೇರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ.

Exit mobile version