ಆಸ್ಪತ್ರೆ ಬೆಡ್ ಮ್ಯಾಲೆ ತಾಳಿ ಕಟ್ಟಿ ಮದ್ವಿ ಮಾಡಿಕೊಂಡು ಮಾನವೀಯತೆ ಮೆರೆದ ವರ

ಪ್ರಯಾಗ್‌ರಾಜ್: ಮದ್ವಿ ಅನ್ನೋದು ಸ್ವರ್ಗದಾಗ ನಿಶ್ಚಯ ಅನ್ನೋದು ಕೇಳಿವಿ. ಆದ್ರ ಅದೆಷ್ಟೋ ಮದ್ವಿ ಇನ್ನೇನು ತಾಳಿ ಕಟ್ ಬೇಕು ಅನ್ನೋ ಹೊತ್ನ್ಯಾಗ ನಿಂತಿರೋ ಉದಾಹರಣೆಗಳು ಭಾಳ್ ಅದಾವು. ಆದ್ರ ಇಲ್ಲೊಂದು ಜೋಡಿ ಸ್ವರ್ಗದಾಗ ಮದ್ವಿ ನಿಶ್ಚಿಯ ಆಗಿರತೈತಿ ಅನ್ನೋ ಮಾತಿಗೆ ಜೀವಾ ತುಂಬ್ಯಾರ.

ಹೌದ್ರಿ, ಇನ್ನೇನು ಸ್ವಲ್ಪ ಹೊತ್ತಿನ್ಯಾಗ, ಅಂದುಕೊಂಡಂಗ ಆಗಿದ್ರ, ಗಟ್ಟಿ ಮ್ಯಾಳದ ಸದ್ದಿನ್ಯಾಗ, ತಾಳಿ ಕಟ್ಟಿ ಜೋಡಿ ಒಂದಾಗುತ್ತಿತ್ತು. ಮದ್ವಿಗೆ ಬಂದೋರೆಲ್ಲ ಅಕ್ಕಿಕಾಳ್ ಹಾಕಿ ಹೊಟ್ಟಿ ತುಂಬಾ ತಿಂದು ಹರಿಸಿ ಹೋಗತಿದ್ರು. ಆದ್ರ ಇಲ್ಲಿ ಹಂಗಾಗಲಿಲ್ಲ. ತಾಳಿ ಕಟ್ ಬೇಕು ಅನ್ನೋ ಸ್ವಲ್ಪ ಹೊತ್ತಿಗೆ ಮುಂಚೆ ಇನ್ನೇನು ತಾಳಿಗೆ ಕೊರಳೊಡ್ಡಬೇಕಾದ ಕನ್ಯಾ, ಛಾವಣಿ ಮ್ಯಾಗಿಂದ ಬಿದ್ ಬೆನ್ನಹುರಿಗೆ ಪೆಟ್ ಆಗಿ ಆಸ್ಪತ್ರೆ ಸೇರುವಂಗಾಯಿತು. ಪಾಪ ದಾಂಪತ್ಯಕ್ ಜೊತಿಯಾಗಿ ಏಳು ಹೆಜ್ಜಿ ಹಾಕಬೇಕಾದ ವರ ಆಸ್ಪತ್ರೆ ಕಡಿಗೆ ಹೆಜ್ಜಿ ಹಾಕುವಂಗಾತು.

ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ ಈ ಘಟನೆ ನಡೆದೈತಿ ಮದುವೆ ಮಂಟಪದಲ್ಲಿ ವಧು ಛಾವಣಿಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾಳೆ.

ಪಾಪ, ಆಸ್ಪತ್ರೆ ಹಾಸಿಗೆ ಮ್ಯಾಲ ಮಲಗಿದ್ ವಧುವಿಗೆ ಅಲ್ಲೆ ತಾಳಿ ಕಟ್ಟೊ‌ ಮೂಲಕ, ವರ ಮಾನವೀಯತೆ ಮೆರದಾನ.
ಆಕಿ ಆರಾಮ್ ಆಗಬೇಕು ಅಂದ್ರ ಟೈಮ್ ಬೇಕು ಅಂತ ಡಾಕ್ಟರ್ ಹೇಳಿದ್ರು. ಆದ್ರು ಪಾಪ ತನಗ ನೆಚ್ಚಿ ಕೈಹಿಡಿಯಾಕ್ ಮುಂದಾದಾಕಿಗೆ ಕೈಬಿಡೊದ್ ಬ್ಯಾಡ್ ಅಂತ ದವಾಖಾನಿ ಬೆಡ್ ಮ್ಯಾಲಾ ತಾಳಿ ಕಟ್ಟಿ ಸೈ ಎನಿಸಿಕೊಂಡಾನ. ತಾಳಿ ಕಟ್ಟಿದ ಅವಧೇಶ್, ಕಷ್ಟದ ಸಮಯದೊಳಗ ಆಕೆಯ ಜೊತೆಗಿರುವುದು ನನ್ನ ಧರ್ಮ ಅಂತ ಹೇಳಿ ದೊಡ್ಡ ಮನುಷಾ ಆಗ್ಯಾನ. ಎಷ್ಟೆಲ್ಲ ಕನಸ್ ಕಟ್ಕೊಂಡ್ ಕುಂತಿದ್ ಆರತಿ ತನ್ ಗಂಡನ ಮಾನವೀಯತೆ ಕಂಡು ಭಾವುಕಳದ್ಲಂತ. ಇಬ್ರು ನಡುವಿನ ಬಾಂಧವ್ಯಕ್ ನಮ್ ಆಸ್ಪತ್ರೆ ಬೆಸುಗೆ ಹಾಕಿದ್ದು ನಮಗ ಭಾಳ್ ಖುಷಿ ತಂದೈತಿ ಅಂತ ಆಸ್ಪತ್ರೆ ಡಾಕ್ಟರ್ ಹೇಳ್ಯಾರ. ಹೆಚ್ಚಿನ ಪ್ರಯತ್ನ ಮಾಡಿ ಆದಷ್ಟು ಶೀಘ್ರ ಗುಣಮುಖರಾಗುವಂತೆ ಪ್ರಯತ್ನ ಮಾಡತಿವಿ ಅಂತ ಡಾಕ್ಟರ್ ಹೇಳ್ಯಾರ.

Exit mobile version