ದಾವಣಗೆರೆ: ಸಾರಾಯಿ ಮಾರಾಟ ಮತ್ತೆ ಪ್ರಾರಂಭಿಸಿರುವ ಕಾರನ ರಾಜ್ಯ ಸರ್ಕಾರದ ವಿರುದ್ಧ ಕನಕ ಶ್ರೀಗಳು ಕಿಡಿಕಾರಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಬೆಳ್ಳೋಡಿ ಕಾಗಿನೆಲೆ ಶಾಖಾ ಮಠಧೀಶರಾಗಿರುವ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಕಾಗಿನೆಲೆ ಕನಕ ಗುರುಪೀಠದ ಅಧಿಕೃತ ಪೇಸ್ ಬುಕ್ ಅಕೌಂಟ್ ನಲ್ಲಿ ಹಾಲು ತರಲು ಹೋದವರಿಗೆ ಲಾಠಿಯಿಂದ ಏಟು ಕೊಡುತ್ತೀರಿ, ಆಲ್ಕೋಹಾಲ್ ತರಲು ಹೋದವನಿಗೆ ಕ್ಯೂನಲ್ಲಿ ನಿಲ್ಲಿಸಿ ಸೆಕ್ಯೂರಿಟಿ ಕೊಡುವ ನಮ್ಮ ರಾಜ್ಯ ಸರ್ಕಾರದ ಅಜ್ಞಾನದ ಆಡಳಿತಕ್ಕೆ ನನ್ನ ಧಿಕ್ಕಾರ ಎಂದು ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ…