ದಾವಣಗೆರೆ: ಉಸ್ತುವಾರಿಯಿಂದ ತೆಗೆಸಲು ದಾವಣಗೆರೆಯ ಕೆಲ ಬಿಜೆಪಿ ಶಾಸಕರು ಹವಣಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ದಾವಣಗೆರೆ ಜಿಲ್ಲೆಯ ಬಿಜೆಪಿ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.
ನೀವು ಸಚಿವರಾದ್ರು ಆಗಿ ಏನಾದರು ಮಾಡಿಕೊಳ್ಳಿ ಆದ್ರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರ ಮೇಲೆ ಆರೋಪ ಮಾಡಿ ಅವರನ್ನ ಬದಲಾಯಿಸಲು ನೋಡಿದ್ರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಈ ಬಗ್ಗೆ ನಾನು ದಾವಣಗೆರೆ ಜಿಲ್ಲೆಯ ಬಿಜೆಪಿ ಶಾಸಕರಿಗೆ ನೇರ ಎಚ್ಚರಿಕೆ ನೀಡುವೆ ಎಂದು ಕಿಡಿಕಾದ್ದಾರೆ.