ಉತ್ತರಪ್ರಭ, ಗದಗ :
ಗದಗ ಜಿಲ್ಲಾ ನೂತನ ಜಿಲ್ಲಾಧಿಕಾರಿಯಾಗಿ ಸಿ.ಎನ್.ಶ್ರೀಧರ ಇವರನ್ನು ತಕ್ಷಣವೆ ಜಾರಿಬರುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.
ಗೋವಿಂದ ರೆಡ್ಡಿ,(ಐಎಎಸ್):
ಹೌದು ಮಂಗಳವಾರ ರಾಜ್ಯ ಸರ್ಕಾರ ಗದಗ ಜಿಲ್ಲೆಯ ಹಾಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿರನ್ನು ಕೆವಲ ತಮ್ಮ ಆರು ತಿಂಗಳ ಅವಧಿಯಲ್ಲಿದ್ದ ಇವರನ್ಮು ಯಾವುದೇ ಹುದ್ದೆಗೆ ನೇಮಿಸದೆ ವರ್ಗಾವಣೆ ಮಾಡಲಾಗಿದೆ. ಹಾಗೂ ಇವರ ಸ್ಥಾನಕ್ಕೆ ಸಾಮಾಜಿಕ ಲೆಕ್ಕ ಪರಿಶೋಧಕರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರಾಗಿದ್ದ ಸಿ.ಎನ್.ಶ್ರೀಧರ ಇವರನ್ನು ನೇಮಕಮಾಡಿ ತಕ್ಷಣವೇ ಜಾರಿಗೆಬರುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಿ.ಎನ್.ಶ್ರೀಧರ, (ಐಎಎಸ್):
ಇವರು 2022ರಲ್ಲಿ ಕೆಎಎಸ್ ಇಂದ ಐಎಎಸ್ ಗೆ ಬಡ್ತಿ ಹೊಂದಿದ್ದು, ಇವರು ಜವಳಿ ಅಭಿವೃದ್ಧಿ ಆಯುಕ್ತರು ಮತ್ತು ಕೈಮಗ್ಗ ಮತ್ತು ಜವಳಿ ನಿರ್ದೇಶಕರಾಗಿ, ಕಂದಾಯ ಇಲಾಖೆಯಲ್ಲಿ ಸರ್ವೆ ಮತ್ತು ಸೆಟಲ್ಮೆಂಟ್ ಆಯುಕ್ತರಾಗಿ, ಮತ್ತು ಹಾಲಿ ಸಾಮಾಜಿಕ ಲೆಕ್ಕ ಪರಿಶೋಧಕರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು ಹೀಗೆ ಅನೇಕ ಇಲಾಖೆಯ ಆಡಳಿತದಲ್ಲಿ ಅನುಭವಿಗಳಾಗಿದ್ದಾರೆ. ಸದ್ಯ ಇವರ ನಿವೃತ್ತುಗೆ ಕೊನೆಯ ಎರಡು ವರ್ಷ ಬಾಕಿ ಇದ್ದು ಇವರನ್ನು ಗದಗ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಲಾಗಿದೆ.
