ರೈತ ಸಂಘ, ಹಸಿರು ಸೇನೆ: ಮಹಿಳಾ ಘಟಕ ಉದ್ಘಾಟನೆ

ಉತ್ತರಪ್ರಭ ಸುದ್ದಿ
ಆಲಮಟ್ಟಿ:
ಕನಾ೯ಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಮಹಿಳಾ ಘಟಕವೊಂದು ನೂತನವಾಗಿ ಇಲ್ಲಿ ಆಸ್ತಿತ್ವಕ್ಕೆ ಬಂದಿದೆ. ಈರಯ್ಯ ಸಾಲಿಮಠ ಸಾನ್ನಿಧ್ಯ ಹಾಗು ರವಿ ಕೋತಿನ ಅಧ್ಯಕ್ಷತೆಯಲ್ಲಿ ಶನಿವಾರ ಆಸ್ತಿತ್ವಕ್ಕೆ ಬಂದ ಮಹಿಳಾ ಘಟಕ ಆಲಮಟ್ಟಿ ಶಾಖೆಯ ಉದ್ಘಾಟನೆ ನೆರವೇರಿತು. ಮಾಧುರಾಯನಗೌಡ ಪಾಟೀಲ, ಮಲ್ಲಯ್ಯ ನಾಗೂರಮಠ, ಯಲಗೂರದಪ್ಪ ಹುಗ್ಗಿ, ವೆಂಕಟೇಶ ವಡ್ಡರ, ಸರಸ್ವತಿ ವಸ್ತ್ರದ,ರೇಣುಕಾ ಕಾರಿ, ಸುಮಿತ್ರಾ ಗಣಿ, ಬಿಬಿಜಾನ್ ವಾಲಿಕಾರ ಮತ್ತಿತರರು ಅತಿಥಿಗಳಾಗಿದ್ದರು.

ಹೊಸದಾಗಿ ರಚಿತವಾಗಿರುವ ಈ ಮಹಿಳಾ ಘಟಕದ ಸದಸ್ಯರು ಕ್ರಿಯಾಶೀಲರಾಗಿ ಸಂಘವನ್ನು ಮುನ್ನಡೆಸಿಕೊಂಡು ಹೋಗಬೇಕು. ಅನ್ನದಾತ ರೈತರ ಕುರಿತಾದ ಸಮಸ್ಯೆಗಳು ಉದ್ಬವಿಸಿದಾಗ ಹೋರಾಟಪರ ಗಟ್ಟಿ ಧ್ವನಿ ಎತ್ತಿ ನ್ಯಾಯ ದೊರಕಿಸಲು ಪ್ರಯತ್ನಿಸಬೇಕು ಎಂದು ನೂತನ ಪದಾಧಿಕಾರಿಗಳಿಗೆ ನಿಡಗುಂದಿ ರೈತ ಸಂಘ, ಹಸಿರು ಸೇನೆ ತಾಲೂಕು ಘಟಕದ ಅಧ್ಯಕ್ಷ ಸೀತಪ್ಪ ಗಣಿ ಸಲಹೆ ನೀಡಿದರು.

ರವಿ ಕೋತಿನ, ಮಾದುರಾಯಗೌಡ ಪಾಟೀಲ, ಮಾನಸಿಂಗ್ ಲಮಾಣಿ, ಶೇಖಪ್ಪ ಕೋಳ್ಳಾರ, ರಮೇಶ ವಡ್ಡರ , ಮಂಜು ವಿಶ್ವರ, ರಾಜು ಎಲಿಗಾರ ಉಪಸ್ಥಿತರಿದ್ದರು.

ಪದಾಧಿಕಾರಿಗಳು: ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಆಲಮಟ್ಟಿ ಹೊಸ ಶಾಖೆಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಕಸ್ತೂರಿ ವಡ್ಡರ, ಪ್ರಧಾನ ಕಾರ್ಯದರ್ಶಿಯಾಗಿ ಸುವಣಾ೯ ಬೇನಸೂರ, ಕೋಶ್ಯಾಧ್ಯಕ್ಷರಾಗಿ ಹಣಮವ್ವ ವಡ್ಡರ, ಸಂಘಟನಾಧ್ಯಕ್ಷರಾಗಿ ಪುಳಿಯವ್ವ ವಡ್ಡರ ನೇಮಕ ಮಾಡಲಾಗಿದೆ ಎಂದು ತಾಲೂಕು ಘಟಕದ ಅಧ್ಯಕ್ಷ ಸೀತಪ್ಪ ಗಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version