ಸಾಲಬಾಧೆ ತಾಳಲಾಗದೆ ಅನ್ನದಾತ ಆತ್ಮಹತ್ಯೆ

ವರದಿ: ವಿಠಲ‌ ಕೆಳೂತ್


ಮಸ್ಕಿ:
ಸಾಲಭಾದೆ ತಾಳಲಾರದೆ‌ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ತುರ್ವಿಹಾಳ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಉಪ್ಪಲದೊಡ್ಡಿ ಗ್ರಾಮದ ಹುಲುಗಪ್ಪ ಎಂಬ ರೈತನು ತಿಡಿಗೋಳದ ಪ್ರಗತಿ ಕೃಷ್ಣಾ ಗ್ರಾಮೀಣ ರಾಷ್ಟ್ರೀಯ ಬ್ಯಾಂಕಿನಲ್ಲಿ 1 ಲಕ್ಷ, ಪ್ರಾಥಮಿಕ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕನಲ್ಲಿ 50 ಸಾವಿರ ಸಾಲ, ಜಮೀನಿನ ಅಗ್ರಿಮೆಂಟ್ ಗಾಗಿ 5 ಲಕ್ಷ, ಖಾಸಗಿ ಸಂಸ್ಥೆಗಳ ಬ್ಯಾಂಕನಲ್ಲಿ 1 ಲಕ್ಷ ಅಧಿಕ ಸಾಲ ಸೇರಿದಂತೆ ಒಟ್ಟು 7 ಲಕ್ಷ 50 ಸಾವಿರ ರೂಪಾಯಿಯನ್ನು ಸಾಲವನ್ನು ತಗೆದುಕೊಂಡಿದ್ದು, ಸಾಲ ತೀರಿಸಲು ಆಗದೇ ಮನನೊಂದು ಕೆನಾಲ್ ಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ತುರ್ವಿಹಾಳ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಆತ್ಮಹತ್ಯೆ ಮಾಡಿಕೊಂಡ ರೈತನು ಬಡ ಕುಟುಂಬಕ್ಕೆ ಆಸರೆಯಾಗಿದ್ದ, ಕುಟುಂಬದ ಮುಖ್ಯಸ್ಥನನ್ನು ಕಳೆದುಕೊಂಡ ಕುಟುಂಬ ದಿಕ್ಕು ತೋಚದಂತಾಗಿದೆ. ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ ಈ ನೊಂದ ಕುಟುಂಬಕ್ಕೆ ತಾಲೂಕ ಆಡಳಿತ, ಸರ್ಕಾರ ಕುಟುಂಬದ ನೆರವಿಗೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Exit mobile version