ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಯಿಂದ ಮನವಿ

ಲಕ್ಷ್ಮೇಶ್ವರ: ನಗರದ ತಹಸೀಲ್ದಾರ್ ಕಚೇರಿಯಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಯಿಂದ ಮನವಿ ಸಲ್ಲಿಸಲಾಯಿತು ಶಿರಸ್ತೆದಾರ ರೇಣುಕಾ ಹರಿಜನ ಮನವಿ ಸ್ವೀಕರಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಮಧ್ಯರಾತ್ರಿ ಬಾಗಲಕೋಟ ಜಿಲ್ಲೆಯ ಮುದೋಳ ತಾಲೂಕಿನ ವೆಂಕಟಾಪುರ, ಲೋಕಾಪುರದಲ್ಲಿ ಪ್ರತಿಷ್ಟಾಪಿಸಿದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ತೆರವುಗೊಳಿಸಿದ್ದು ಮತ್ತೆ ಅದೆ ಜಾಗದಲ್ಲಿ ಮರು ಪ್ರತಿಷ್ಠಾಪನೆ ಅಲ್ಲಿಯೇ ಆಗಬೇಕು ಹಾಗೂ ಮೂರ್ತಿ ತೆರವುಗೊಳಿಸಿದವರ ಮೇಲೆ ಕಾನೂನ ಕ್ರಮ ಆಗಬೇಕೆಂದು ಇಲ್ಲವಾದರೆ ಹೋರಾಟ ಮಾಡಲಾಗುವುದು ಎಂದು ಹೇಳಿದರು

ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಹನುಮಂತ ಭ ಶೇರಸೂರಿ,ಉಪಾಧ್ಯಕ್ಷ ಮಂಜು ತ್ವಾಗಿ, ಕಾರ್ಯದರ್ಶಿ ರಾಮನಗೌಡ್ರ ಹೊಸಗೌಡ್ರ, ತಾಲೂಕ ಯುವ ಘಟಕ ಅಧ್ಯಕ್ಷ ಕಿರಣ ಹುಡೇದ, ಶಿವರಾಜ ಉಳ್ಳಟ್ಟಿ, ಮಾರುತಿ ಬಾಲೇಹೊಸೂರ ಕಾರ್ಯಕರ್ತರು ಉಪಸ್ಥಿತರಿದ್ದರು

Exit mobile version