ನಿವೃತ್ತ ಪ್ರಾಚಾರ್ಯ ಡಿ.ಡಿ. ಕಡೇಮನಿ ನಿಧನ

ಗದಗ: ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯರು ಮತ್ತು ನೆಲ್ಸನ್ ಮಂಡೇಲಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರೂ ಆಗಿದ್ದ ಶ್ರೀ ಡಿ.ಡಿ. ಕಡೇಮನಿಯವರು ತಮ್ಮ ೭೩ನೇ ವಯಸ್ಸಿನಲ್ಲಿ ದಿ.೬ ರಂದು ಗುರುವಾರ ಹೃದಯಾಘಾತದಿಂದ ನಿಧನರಾದರು.
ಇವರು ತಮ್ಮ ಧರ್ಮಪತ್ನಿ ಶ್ರೀಮತಿ ವಿಜಯಲಕ್ಷ್ಮಿ ಕಡೇಮನಿ, ಸುಪುತ್ರರಾದ ವಿಶಾಲ್ ಹಾಗೂ ವಿಜಯಕುಮಾರ, ಮಗಳು ಶ್ರೀಮತಿ ರೇಶ್ಮಾ ಕೋಂ. ಆನಂದ ಜಿಗಜಿಣಗಿ, ಸೊಸೆ ಶ್ರೀದೇವಿಯವರನ್ನು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮಾಜಿ ಕೇಂದ್ರ ಸಚಿವರು ಹಾಗೂ ಸಂಸದರಾದ ಶ್ರೀ ರಮೇಶ ಜಿಗಜಿಣಗಿ, ಹಿರಿಯರಾದ ಮೋಹನ ಆಲಮೇಲಕರ, ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ‍್ಯದರ್ಶಿಗಳಾದ ಶಿವಾನಂದ ಎಸ್. ಪಟ್ಟಣಶೆಟ್ಟಿ, ಹಿರಿಯ ಮುಖಂಡರಾದ ಎಸ್. ಎನ್. ಬಳ್ಳಾರಿ ನಿವೃತ್ತ ಶಿಕ್ಷಕರು, ಪ್ರೊ. ಸತೀಶ ಪಾಸಿ ಹಾಗೂ ಅವರ ಅಭಿಮಾನಿಗಳು ಡಿ.ಡಿ. ಕಡೇಮನಿಯವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

ಮೃತರ ಅಂತ್ಯಕ್ರಿಯೆ ದಿ.೭ ರಂದು ಶುಕ್ರವಾರ ಮುಂಜಾನೆ ೧೧ ಗಂಟೆಗೆ ಹಾತಲಗೇರಿ ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ಜರುಗುವುದು.

Exit mobile version