ಉತ್ತರಪ್ರಭ ಸುದ್ದಿ
ಕನಕಗಿರಿ: ಕನಕಗಿರಿ ತಾಲೂಕಿನ ನವಲಿ ತಾಂಡಾ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಹನುಮಮ್ಮ ಮಂಜುನಾಥ್ ಮತ್ತು ಮಾರುತಿ ಕರಡೋಣ ಅವರಿಗೆ ಮಂಗಳೂರಿನ ಕಥಾಬಿಂದು ಸಾಹಿತ್ಯ-ಸಂಸ್ಕೃತಿ ವೇದಿಕೆಯು ವಿವಿಧ ಕ್ಷೇತ್ರಗಳ ಸಾಧಕರಿಗೆ ಕೊಡ ಮಾಡುವ ಕರಾವಳಿ ಕರ್ನಾಟಕ ರತ್ನ 2021 ಪ್ರಶಸ್ತಿಗೆ ನವಲಿ ತಾಂಡದ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಹನುಮಮ್ಮ ಮಂಜುನಾಥ್ ಮತ್ತು ಮಾರುತಿ ಕರಡೋಣ ಭಾಜನರಾಗಿದ್ದಾರೆ ಮಂಗಳೂರಿನ ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ರವೀಂದ್ರ ಕಲಾಭವನದಲ್ಲಿ ನಡೆದ ಸಾಂಸ್ಕೃತಿಕ ಕಲಾ ಉತ್ಸವದ ಸಂದರ್ಭದಲ್ಲಿ ಶ್ರೀಮತಿ ಮಂಜುನಾಥ್ ಹನುಮಮ್ಮ ಮತ್ತು ಮಾರುತಿ ಕರಡೋಣ ಅವರಿಗೆ ಸ್ಮರಣಿಕೆ ಯೊಂದಿಗೆ ಸನ್ಮಾನಿಸಿ ಗೌರವಿಸುವ ಮೂಲಕ ಪ್ರಶಸ್ತಿ ಪ್ರಧಾನ ಮಾಡಲಾಯಿತು