ಮಳೆಗೆ ರಸ್ತೆ ಕುಸಿತ : ದುರಸ್ತೆಗೆ ಆಗ್ರಹ

ಮುಳಗುಂದ: ಸಮೀಪದ ನೀಲಗುಂದ ಹಾಗೂ ಅಂತೂರ ಬೆಂತೂರ ಗ್ರಾಮಗಳ ಮಧ್ಯೆ ಮಳೆಯಿಂದಾಗಿ ರಸ್ತೆ ಕುಸಿತವಾಗಿದ್ದು ಸುಗಮ ಸಂಚಾರಕ್ಕೆ ಅಡಿಯಾಗಿದೆ.
ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ರಸ್ತೆಯ ಒಂದು ಬದಿ ಸಂಪೂರ್ಣ ಕುಸಿತವಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಲಾಕ್ಡೌ ನ್ ಇರುವುದರಿಂದ ಬಸ್ ಹಾಗೂ ವಾಹನ ದಟ್ಟನೆ ಕಡಿಮೆ ಇರುವುದರಿಂದ ಅನಾವುತ ತಪ್ಪಿದೆ. ರಸ್ತೆ ಪಕ್ಕದಲ್ಲಿ ದೊಡ್ಡ ಕಾಲುವೆ ಇದ್ದು ಕಲ್ಲಿನ ಪರಸಿ ನಿರ್ಮಿಸಲಾಗಿತ್ತು. ಮಳೆ ನೀರಿಗೆ ಮಣ್ಣು ಕುಸಿದಿದೆ ಪರಿಣಾಮ ಮೂಕ್ಕಾಲು ಭಾಗದಷ್ಟು ರಸ್ತೆ ಕುಸಿದಿದ್ದು ವಾಹನಗಳ ಸಂಚಾರ ಅಪಾಯಮಟ್ಟದಲ್ಲಿದೆ.
ಇನ್ನೂ ಪಟ್ಟಣದ ಬೈಪಾಸ್ ರಸ್ತೆಯನ್ನ ಇಚೆಗೆ ಸಿಸಿ ರಸ್ತೆಯಾಗಿ ಅಭಿವೃದ್ದಿಪಡಿಸಲಾಗಿದ್ದು ರಸ್ತೆ ಇಕ್ಕೆಲುಗಳಲ್ಲಿ ಹಾಕಿದ್ದ ಮಣ್ಣು ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ವಾಹನ ಸಂಚಾರ ಆರಂಭಕ್ಕೂ ಮುನ್ನ ದುರಸ್ತೆ ಕಾಮಗಾರಿ ಕೈಗೊಳ್ಳಬೇಕು. ಎಂದು ಪ.ಪಂ ಮಾಜಿ ಸದಸ್ಯ ಮಹಾಂತೇಶ ಕಣವಿ ಆಗ್ರಹಿಸದ್ದಾರೆ.

Exit mobile version