ಲಕ್ಷ್ಮೇಶ್ವರದಲ್ಲಿ ಗೊಬ್ಬರ ಖರೀದಿಗಾಗಿ ಕ್ಯೂ..!

ಲಕ್ಷ್ಮೇಶ್ವರ: ಜಿಲ್ಲೆಯಾದ್ಯಂತ ಮುಂಗಾರು ಬಿತ್ತನೆ ಅಬ್ಬರ ಜೋರಾಗಿದೆ. ಮುಂಗಾರು ಹಂಗಾಮಿನ ಹತ್ತಿ, ಹೆಸರು, ಶೇಂಗಾ, ಗೋವಿನ ಜೋಳ ಬಿತ್ತನೆಗೆ ಬೀಜ, ಗೊಬ್ಬರ ಖರೀದಿಯಲ್ಲಿ ರೈತರು ತಲ್ಲೀನರಾಗಿದ್ದಾರೆ.

ಬೀಜ, ಗೊಬ್ಬರ ಖರೀದಿಗೆ ಪ್ರತಿ ಆಗ್ರೋ ಕೇಂದ್ರದ ಮೇಲೆ ನೂರಾರು ರೈತರು ಸರತಿ ಸಾಲನಲ್ಲಿ ನಿಂತ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ. ಲಕ್ಷ್ಮೇಶ್ವರ ತಾಲೂಕಿನ ರೈತರಿಂದ ರಸಗೊಬ್ಬರ ಖರೀದಿ ಜೋರಾಗಿದೆ. ಗೊಬ್ಬರ ಅಂಗಡಿಗಳ ಮುಂದೇ ಕ್ಯೂ ನಿಂತು ಗೊಬ್ಬರ ಖರೀದಿ ದೃಷ್ಯಗಳು ಸಾಮಾನ್ಯವಾಗಿದ್ದವು.

Exit mobile version