ನಾಗಾವಿ ತಾಂಡದಲ್ಲಿ ಜಲಜೀವನ ಯೋಜನೆಗೆ ಚಾಲನೆ

ಮುಳಗುಂದ: ತಾಲೂಕಿನ ನಾಗಾವಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಗಾವಿ ತಾಂಡದಲ್ಲಿ ಹಾಗೂ ಬಿಂಕದಕಟ್ಟಿ, ಮಲ್ಲಸಮುದ್ರ ಗ್ರಾಮಗಳಲ್ಲಿ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗೆ ಭಾನುವಾರ ಶಾಸಕ ಎಚ್.ಕೆ.ಪಾಟೀಲ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು 84ಲಕ್ಷ ರೂ ಅನುದಾನದಲ್ಲಿ ತಾಂಡಾದ 371 ಮನೆಗಳಿಗೆ ಕುಡಿಯುವ ನೀರು ಸರಬರಾಜು ಪೈಪಲೈನ್, ನಳ ಜೋಡನೆ ಹಾಗೂ 50 ಸಾವಿರ ಲೀ ಸಾಮರ್ಥ್ಯದ ಮೇಲ್ಮಟ್ಟದ ಜಲ ಸಂಗ್ರಹಗಾರ ನಿರ್ಮಾಣವಾಗಲಿದೆ. ಕಾಲಮಿತಿಯೊಳಗೆ ಕಾಮಗಾರಿ ಪೂರ್ಣ ಮಾಡಬೇಕು. ಎಂದು ಗುತ್ತಿಗೆದಾರನಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ವಾಸಣ್ಣ ಕುರಡಗಿ, ತಾ.ಪಂ ಮಾಜಿ ಅಧ್ಯಕ್ಷ ಬಿ.ಆರ್ ದೇವರೆಡ್ಡಿ, ಗ್ರಾ.ಪಂ ಅಧ್ಯಕ್ಷೆ ಹನುಮವ್ವ ಸಿದ್ನೇಕೊಪ್ಪ, ಉಪಾಧ್ಯಕ್ಷ ಸುರೇಶ ಪವಾರ, ಸದಸ್ಯರಾದ, ಸೋಮಪ್ಪ ಪವಾರ, ಯಮನಪ್ಪ ಬಾಗಲಕೋಟಿ, ಕುಬೇರಪ್ಪ ರಾಠೋಡ, ಹಜರೇಸಾಬ ನದಾಫ, ಕಾಳಪ್ಪ ಪವಾರ, ಮುಖಂಡರಾದ ದಯಾನಂದ ಪವಾರ, ಮಾನಪ್ಪ ತೋಟದ, ಸರೋಜಾ ತೋಟದ, ಹಾಗೂ ಮೊದಲಾದವರು ಇದ್ದರು.

Exit mobile version