ಲಕ್ಷ್ಮೇಶ್ವರ: ಜೋಳದ ಬೆಳೆಗೆ ಬೆಂಕಿ ಬಿದ್ದು ಮೂರು ಎಕರೆ ಪ್ರದೇಶದಲ್ಲಿ ಬೆಳೆದ ಜೋಳದ ಬೆಳೆ ಹಾನಿಯಾಗೀಡಾಗಿದ ಘಟನೆ ತಾಲೂಕಿನ ಬಡ್ನಿ ಗ್ರಾಮದಲ್ಲಿ ನಡೆದಿದೆ.
ಒಂದು ವಾರದ ಹಿಂದೆಯೆ ಅಕಾಲಿಕ ಮಳೆಯಿಂದ ಜೋಳದ ಬೆಳೆ ಸಂಪೂರ್ಣ ಬಿದ್ದು ಹಾಳಾಗಿ ಹೋಗಿತ್ತು. ಆದರೆ ಅಳಿದುಳಿದ ಅಲ್ಪ ಬೆಳೆಯಾದರು ಕೈಸೇರುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ರೈತನಿಗೆ ಇದರಿಂದ ಭಾರಿ ನಿರಾಶೆಯಾಗಿದೆ.
ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆನ್ನಲಾಗಿದೆ. ಬಡ್ನಿ ಗ್ರಾಮದ ರೈತ ಭರಮಪ್ಪ ಬೀರಪ್ಪ ಕಂಬಳೆ ಎಂಬ ರೈತನಿಗೆ ಸೇರಿದ 3 ಎಕರೆ ಬಿಳಿ ಜೋಳ ಸುಟ್ಟು ಕರಕಲಾಗಿದ್ದು, ಇನ್ನೇನು ಕಟಾವಿಗೆ ಬಂದ ಬೆಳೆ ಕೈಸೇರದಂತಾಗಿದೆ.
ಜಾನುವಾರುಗಳಿಗೆ ವರ್ಷದ ಊಟಕ್ಕೆ ಆಸರೆಯಾಗಿದ್ದ ಮೇವು ಸುಟ್ಟಿದ್ದು ದೆಡೆಯಾದರೆ, ಮನೆ ಮಂದಿಗೆಲ್ಲ ಅನ್ನಕ್ಕೆದಾರಿಯಾಗಿದ್ದ ಬೆಳೆ ಕೈಸೇರದಂತಾಗಿದ್ದು ರೈತನನ್ನು ತೀವ್ರ ಸಂಕಷ್ಟಕ್ಕೀಡು ಮಾಡಿದೆ. ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.