ಲಕ್ಷ್ಮೇಶ್ವರ: ನಗರದ ಪ್ರತಿಷ್ಠಿತ ಶ್ರೀಮತಿ ಕಮಲಾ ಹಾಗೂ ಶ್ರೀ.ವೆಂಕಪ್ಪ ಎಂ ಅಗಡಿ ಇಂಜನೀಯರಿಂಗ್ ಕಾಲೇಜು,ಲಕ್ಷ್ಮೇಶ್ವರದಲ್ಲಿ ಸಿಇಟಿ ಆಪ್ಷನ್ ಎಂಟ್ರಿ ಸಹಾಯ ಕೇಂದ್ರ ಆರಂಭಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದಂತಹ ಡಾ.ಉದಯಕುಮಾರ ಹಂಪಣ್ಣವರ ತಿಳಿಸಿದ್ದಾರೆ.
ಇಂಜನೀಯರಿಂಗ್ ಶಿಕ್ಷಣ ಪ್ರವೇಶ ಬಯಸುವ ವಿದ್ಯಾರ್ಥಿಗಳು ಅಪ್ಷನ್ ಎಂಟ್ರಿಯನ್ನು ನವೆಂಬರ್ 22ರಿಂದ ನವೆಂಬರ್ 25ರ ವರೆಗೆ ಆನ್ಲೈನ್ ನಲ್ಲಿ ಭರ್ತಿ ಮಾಡಬಹುದು. ಮಹಾವಿದ್ಯಾಲಯದಲ್ಲಿ ಸಹಾಯಕೇಂದ್ರವನ್ನು ಆರಂಭಿಸಲಾಗಿದೆ.ವಿದ್ಯಾರ್ಥಿಗಳು ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಆಡಳಿತಾಧಿಕಾರಿಗಳಾದಂತಹ ಡಾ.ಶ್ರೀನಿವಾಸ ರಜಪೂತ ,ಪ್ರವೇಶಾತಿ ಕೇಂದ್ರದ ಮುಖ್ಯಸ್ಥರಾದಂತಹ ಪ್ರೊ.ಗಿರೀಶ ಯತ್ತಿನಹಳ್ಳಿ ಹಾಗೂ ಸಿಬ್ಬಂದಿ ವರ್ಗವು ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ ಪ್ರವೀಣ ತಡಸ ಅವರನ್ನು ಮೊಬೈಲ್ ಸಂಖ್ಯೆಗೆ 8867339990/9448120344 ಸಂಪರ್ಕಿಸಬಹುದು.
