ಗದಗ: ಸಾಂಸ್ಕೃತಿಕ, ವೈಜ್ಞಾನಿಕ,ಸಾಮಾಜಿಕವಾಗಿ ಒಂದಲ್ಲ ಒಂದು ಪ್ರಯತ್ನಗಳನ್ನು ಮಾಡುತ್ತಲೇ ಇರುವ ಜಿಲ್ಲೆಯ ಲಕ್ಷ್ಮೇಶ್ವರದ ಸ್ಕೂಲ್ ಚಂದನ್ ಶಾಲೆಯ ಪುಟಾಣಿಗಳು ಕೊರೋನಾ ಜಾಗೃತಿಗಾಗಿ ನೀಡಿದ ಸಂದೇಶ ಉತ್ತಮವಾಗಿ ಮೂಡಿ ಬಂದಿದೆ. ಸದಾ ಜನಪರ, ಜೀವಪದ ಕಾಳಜಿಯೊಂದಿಗೆ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಮಕ್ಕಳ ಕನಸುಗಳಿಗೆ ಬಣ್ಣ ತುಂಬುತ್ತಿರುವ ಸಂಸ್ಥೆಯ ಸಂಸ್ಥಾಪಕ ಟಿ.ಈಶ್ವರ ಹಾಗೂ ಆಡಳಿತ ಮಂಡಳಿ ಮತ್ತು ಶಾಲೆಯ ಸಿಬ್ಬಂಧಿಗಳ ಈ ಪ್ರಯತ್ನ ಮೆಚ್ಚುಗೆಗೆ ಪಾತ್ರವಾದದ್ದು.