ಮಹನೀಯರ ಕೊಡುಗೆ ನೆನಹು ಅಗತ್ಯ- ನುಗ್ಗಲಿ

ಉತ್ತರಪ್ರಭ
ಆಲಮಟ್ಟಿ;
ಪ್ರತಿಯೊಬ್ಬ ಭಾರತೀಯನಿಗೆ ಸಂವಿಧಾನವೇ ಶ್ರೇಷ್ಠ, ಅಂತಿಮ ಗ್ರಂಥ, ಅದರ ಪ್ರಕಾರ ನಾವು ನಡೆಯುವುದೇ ಅದಕ್ಕೆ ನೀಡಿದ ಗೌರವ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹೇಳಿದರು.
ಆಲಮಟ್ಟಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸಂವಿಧಾನ ನಿರ್ಮಾತೃಗಳನ್ನು ನಾವು ನೆನಹಲೇಬೇಕು, ಈಗಿನ ಪೀಳಿಗೆಯ ಮಕ್ಕಳಿಗೆ ಅವರ ಬಗ್ಗೆ ಹಾಗೂ ಸಂವಿಧಾನದ ಮಹತ್ವದ ಬಗ್ಗೆ ತಿಳಿಸಿಕೊಡಬೇಕಿದೆ ಎಂದರು.
ಎಸ್ ಡಿಎಂಸಿ ಅಧ್ಯಕ್ಷ ನಿಸ್ಸಾರ್ ಪಿಂಜಾರ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಶಿಕ್ಷಕ ಬಸವರಾಜ ಯರವಿನತೆಲಿಮಠ, ಹನುಮಂತ ಬೆಂಡಿಗೇರಿ, ಸಾವಿತ್ರಿ ಅಂಗಡಿ, ಕೆ.ಇ. ಪರಾಂಡೆ ಇದ್ದರು.

Exit mobile version