ಶಿಕ್ಷಕ ಸ್ನೇಹಿ ಸಚಿವ ನಾಗೇಶ್ ಗೆ ಅಭಿನಂದಿಸಿದ ಶಿಕ್ಷಕರ ಸಂಘ

ಉತ್ತರಪ್ರಭ ಸುದ್ದಿ
ಆಲಮಟ್ಟಿ:
ಶಿಕ್ಷಕ ಸ್ನೇಹಿ ವರ್ಗಾವಣಾ ಕಾಯ್ದೆಯನ್ನು ಉಭಯ ಸದನಗಳಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ.ನಾಗೇಶ್ ಅವರನ್ನು ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತುಂಬು ಹೃದಯದಿಂದ ಅಭಿನಂದನೆ ಸಲ್ಲಿಸಿದೆ.ಶುಕ್ರವಾರ ಸಚಿವರ ಕಚೇರಿಗೆ ತೆರಳಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ, ಸಂಘದ ಹಾಗು ರಾಜ್ಯದ ಸಮಸ್ತ ಶಿಕ್ಷಕ ಬಳಗದ ಪರವಾಗಿ ಸಚಿವ ಬಿ.ಸಿ.ನಾಗೇಶ್ ಅವರನ್ನು ಅಭಿನಂದಿಸಿದರು. ಈ ವೇಳೆ ಸಚಿವರಿಗೆ ಹೂಗುಚ್ಚ ನೀಡಿ ಸನ್ಮಾನಿಸಿ ಗೌರವಿಸಿದರು.

ರಾಜ್ಯದ ಶಿಕ್ಷಕರ ಬಹುದಿನಗಳ ಬೇಡಿಕೆಯಾದ ಶಿಕ್ಷಕರ ವರ್ಗಾವಣೆಯನ್ನು ಶಿಕ್ಷಕ ಸ್ನೇಹಿ ವರ್ಗಾವಣೆಯಾಗಿ ಮಂಡಿಸಿ ಉಭಯ ಸದನಗಳಲ್ಲಿ ಅನುಮೋದನೆ ಪಡೆದುಕೊಂಡಿದ್ದು ಶಿಕ್ಷಕರ ವಲಯದಲ್ಲಿ ಹೊಸ ನೆಮ್ಮದಿಯ ಸಂಚಲನ ಮೂಡಿಸಿದೆ. ಗುರು ವೃಂದದ ಮೊಗದಲ್ಲಿ ಹರ್ಷದ ಬುಗ್ಗೆ ಸೃಷ್ಟಿಯಾಗಿದೆ. ಶಿಕ್ಷಕ ಸ್ನೇಹಿ ಸಚಿವರು, ದಕ್ಷರು, ಪ್ರಾಮಾಣಿಕರು,ಪಾರದರ್ಶಕರು ಅಗಿದ್ದಾರೆ. ಶಿಕ್ಷಕರ ಬಹುತೇಕ ಎಲ್ಲ ಸಮಸ್ಯೆಗಳಿಗೆ ಮುಕ್ತವಾಗಿ ಸ್ಪಂದಿಸಿ ಒತ್ತಡಗಳ ಮಧ್ಯೆಯೂ ಉತ್ಕಟ ಮಟ್ಟದಲ್ಲಿ ಕ್ರಿಯಾಶೀಲತೆಯಿಂದ ತಮ್ಮ ಹೊಣೆಗಾರಿಕೆ ನಿಭಾಯಿಸುತ್ತಿದ್ದಾರೆ. ಸಚಿವರ ಕಾರ್ಯಕ್ಷಮತೆ ಅದಮ್ಯ ಚೇತನ ಭರಿತವಾಗಿದೆ ಎಂದು ಸಚಿವ ನಾಗೇಶ್ ಅವರ ಸೇವಾ ಮನೋಭಾವದ ಗುಣಗಾನ ಶಂಭುಲಿಂಗನಗೌಡ ಪಾಟೀಲ ಹಾಗು ಚಂದ್ರಶೇಖರ ನುಗ್ಲಿ ಬಣ್ಣಿಸಿದ್ದಾರೆ.

Exit mobile version