ನಾಳೆ ಮೀಡಿಯಾ ಕ್ಲಬ್ ನಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ


ಕೊಪ್ಪಳ: ಕರ್ನಾಟಕ ಪತ್ರಿಕಾ ದಿನಾಚರಣೆಯನ್ನು ಕೊಪ್ಪಳ ಮೀಡಿಯಾ ಕ್ಲಬ್ ವತಿಯಿಂದ ಜು. 1ರಂದು ಬೆಳಿಗ್ಗೆ 10.30ಕ್ಕೆ ತೋಟಗಾರಿಕೆ ಇಲಾಖೆಯ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಗದಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಜ್ಜನವರು ಪೀಠಾಧಿಪತಿ ಕಾರ್ಯಕ್ರಮ ಉದ್ಘಾಟಿಸುವರು. ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ಉಪನ್ಯಾಸ ನೀಡುವರು.

ಮೀಡಿಯಾ ಕ್ಲಬ್ ಅಧ್ಯಕ್ಷ ಶರಣಪ್ಪ ಬಾಚಲಾಪುರ ಅಧ್ಯಕ್ಷತೆ ವಹಿಸುವರು. ವಾರ್ತಾಧಿಕಾರಿ ಬಿ.ವಿ. ತುಕರಾಮರಾವ್, ಪತ್ರಕರ್ತ ವಿನಾಯಕ ಶ್ರೀವಾಸ್ತವ್ ಪಾಲ್ಗೊಳ್ಳುವರು.

ವಿವಿಧ ಪ್ರಶಸ್ತಿಗಳಿಗೆ ಭಾಜನರಾದ ಶಿವಕುಮಾರ ಪತ್ತಾರ, ಛಾಯಗ್ರಾಹಕರಾದ ಪ್ರಕಾಶ ಕಂದಕೂರು, ಭರತ್ ಕಂದಕೂರ, ಪತ್ರಕರ್ತರಾದ ಹುಸೇನ ಪಾಷಾ, ದೇವು ನಾಗನೂರು ಹಾಗೂ ಮೌಲಾಹುಸೇನ ಅವರಿಗೆ ಬುಲ್ಡಿಯಾರ ಸನ್ಮಾನ ನಡೆಯಲಿದೆ ಎಂದು ಮೀಡಿಯಾ ಕ್ಲಬ್ ಪ್ರಕಟಣೆ ತಿಳಿಸಿದೆ.

Exit mobile version