ಹಿರಿಯರ ಹಗಲು ಯೋಗಕ್ಷೇಮ ಕೇಂದ್ರ ಉದ್ಘಾಟನೆ

ಉತ್ತರಪ್ರಭ ಸುದ್ದಿ
ನರಗುಂದ:
ಸ್ನೇಹ ಸಂಜೀವಿನಿ ವಿವಿದೋದ್ದೇಶಗಳ ಹಾಗೂ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ ಅಡಿಯಲ್ಲಿ ಇಂದು ಹಿರಿಯ ನಾಗರೀಕರ ಹಗಲು ಯೋಗಕ್ಷೇಮ ಕೇಂದ್ರವನ್ನು ಪುರಸಭೆಯ ಕಲಾಭವನದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಅಧ್ಯಕ್ಷ ವಿರೇಶ ನಾಗಠಾಣ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

ಸಾನಿಧ್ಯವನ್ನು ಹಿರೇಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ವೀರಕ್ತಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಪತ್ರೀವನಮಠದ ಶ್ರೀ ಗುರುಸಿದ್ಧವೀರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಬೈರನಹಟ್ಟಿ ವೀರಕ್ತಮಠದ ಶ್ರೀ ಶಾಂತಲಿAಗ ಮಹಾಸ್ವಾಮಿಗಳು ಇರುವರು.

ಅತಿಥಿಗಳಾಗಿ ಗೌರವಾಧ್ಯಕ್ಷೆ ಗೀತಾ ಗುಡಿಸಾಗರ, ಲಯನ್ಸ ಕ್ಲಬ್ ಅಧ್ಯಕ್ಷ ಉಮೇಶಗೌಡ ಪಾಟೀಲ, ಪ್ರವೀಣ ಯಾವಗಲ್ಲ ಡಾ.ಸಂಗಮೇಶ ಕೊಳ್ಳಿಯವರ, ಪರಶುರಾಮ ಹಿರೇಮನಿ, ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಹವಾಲ್ದಾರ, ಉಪಾಧ್ಯಕ್ಷೆ ಅನ್ನಪೂರ್ಣ ಯಲಿಗಾರ ಇತರರು ಇರುವರು.

Exit mobile version