ಲಕ್ಷ್ಮೇಶ್ವರ.
ಬೈಕ್ ಕಳ್ಳನನ್ನು ಪತ್ತೆ ಹಚ್ಚುವಲ್ಲಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಠಾಣೆ ಪೊಲೀಸರು ಯಶಸ್ಸಿಯಾಗಿದ್ದಾರೆ.
ನಾಲ್ಕು ಬೈಕಗಳನ್ನು ಕಳ್ಳತನ ಮಾಡಿದ ಕಳ್ಳನನ್ನು ಲಕ್ಷ್ಮೇಶ್ವರ ಪೊಲೀಸರು ಹಿಡಿಯುವಲ್ಲಿ ಯಶಸ್ವಿ ಆಗಿದ್ದರೆ.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನೇತೃತ್ವದಲ್ಲಿ ಹಾಗೂ ಶಿರಹಟ್ಟಿ ವೃತ್ತ ನಿರೀಕ್ಷಕ ವಿಕಾಸ ಲಮಾಣಿ ಅವರ ಮಾರ್ಗದರ್ಶನದಲ್ಲಿ ಲಕ್ಷ್ಮೇಶ್ವರ ಪಿಎಸ್ಐ ಪ್ರಕಾಶ ಡಿ ಅವರು ಸಿಬ್ಬಂದಿಗಳಾದ ಎಮ್ ಬಿ ವಡ್ಡಟ್ಟಿ, ಎಚ್ ಐ ಕಲ್ಲಣ್ಣವರ, ಡಿ ಎಸ್ ನದಾಫ, ಇವರ ನೇತೃತ್ವದಲ್ಲಿ ಲಕ್ಷ್ಮೇಶ್ವರ ಹೊರವಲಯದಲ್ಲಿ ಕಳ್ಳನನ್ನ ಹಿಡಿಯುವಲ್ಲಿ ಯಶಸ್ವಿ ಆಗಿದ್ದಾರೆ.
ಆರೋಪಿ ಇಮಾಮಜಾಪರ, ಮಹಮ್ಮದ್ ಗೌಷ, ಮುಲ್ಲಾ ವಯಸ್ಸು 25 ದೇವನೂರು ಗ್ರಾಮ ಕುಂದಗೋಳ ತಾಲೂಕಿನ ಈತನು ಲಕ್ಷ್ಮೇಶ್ವರ, ಗುತ್ತಲ, ಕುಂದಗೋಳ, ಮುಂಡರಗಿ, ಮಾಗಡಿ ಇನ್ನು ಮುಂತಾದ ಕಡೆಗಳಲ್ಲಿ ಮೋಟರ ಸೈಕಲಗಳನ್ನು (ಬೈಕ) ಗಳನ್ನು ಕಳ್ಳತನ ಮಾಡಿದ್ದಾಗಿ ಹೇಳಿದ್ದು ಆರೋಪಿ ಕಡೆಯಿಂದ 1,50, 000 ಸಾವಿರ ರೂ ಕಿಮ್ಮತಿನ ವಿವಿಧ ಕಂಪನಿಯ 4 ಬೈಕ ಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿತನಿಗೆ ಬಂಧಿಸಿ ಹಚ್ಚುವಲ್ಲಿ ಪಿಎಸ್ಐ ಪ್ರಕಾಶ ಡಿ, ಎ, ಎಸ್, ಐ, ಟಿ, ಕೆ, ರಾಠೋಡ, ಜಿ, ಎಮ್, ಬೂದಿಹಾಳ, ಸಿಬ್ಬಂದಿಗಳಾದ ಆರ್ ಎಸ್ ಯರಗಟ್ಟಿ, ಎನ್ ಡಿ ಹುಬ್ಬಳ್ಳಿ, ಆನಂದಸಿಂಗ ದೊಡ್ಡಮನಿ, ಎಮ್ ಡಿ ಲಮಾಣಿ, ಎಮ್ ಬಿ ವಡ್ಡಟ್ಟಿ, ಎಚ್ ಐ, ಕಲ್ಲಣ್ಣವರ, ಎಮ್ ಎಸ್ ಬಳ್ಳಾರಿ, ಎ ಆರ್ ಕಮ್ಮಾರ, ಎಸ್ ಎಫ್ ತಡಸಿ, ಕೆ ಬಿ ಹುಲಗೂರ ಮಹದೇವ ಲಮಾಣಿ ಇವರು ಉತ್ತಮ ಕಾರ್ಯ ನಿರ್ವಹಿಸಿದ್ದರೆ ಎಂದು ಸಿಪಿಐ ವಿಕಾಸ ಲಮಾಣಿ ಹೇಳಿದರು.
ಬೈಕ ಕಳ್ಳನನ್ನು ಬಂದನ ಮಾಡಿದ ಪೊಲೀಸರು
