ಎಮ್ ಇಸ್ ಎಸ್ ಮತ್ತು ಶಿವಸೇನೆ ನಿಷೇಧಿಸಲು ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆಯ ಕಾರ್ಯಕರ್ತರು ಆಗ್ರಹ

ಲಕ್ಷ್ಮೇಶ್ವರ:ನಾಡಧ್ವಜ ಸುಟ್ಟು ಅಪಮಾನ ಮಾಡಿದ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಭಗ್ನಗೊಳಿಸಿದ ಎಂ.ಇ.ಎಸ್.ಹಾಗೂ ಶಿವಸೇನೆ ಸಂಘಟನೆಗಳನ್ನು ನಿಷೇಧಿಸಬೇಕು ಮತ್ತು ಆರೋಪಿಗಳನ್ನು ಕೊಡಲೇ ತಕ್ಕ ಶಿಕ್ಷೆಗೆ ಒಳಪಡಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆಯ ಕಾರ್ಯಕರ್ತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ತಾಲೂಕ ಅಧ್ಯಕ್ಷ ಹನುಮಂತಪ್ಪ ಶರಸೂರಿ ಬೆಳಗಾವಿ ಜಿಲ್ಲೆ ಅನಗೋಳ ಗ್ರಾಮದಲ್ಲಿ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿಯನ್ನು ಭಗ್ನಗೊಳಿಸಿದ ಹಾಗೂ ನಾಡದ್ವಜವನ್ನು ಸುಟ್ಟು ದುರಹಂಕಾರದಿಂದ ಮೆರೆಯುತ್ತಿರುವ ಎಂ.ಇ.ಎಸ್.ಕಾರ್ಯಕರ್ತರು ಹಾಗೂ ಶಿವಸೇನೆಯ ಕಾರ್ಯಕರ್ತರು ಕರ್ನಾಟಕ ರಾಜ್ಯಕ್ಕೆ ಮಾಡಿದ ಘೋರ ಅಪಮಾನವಾಗಿದ್ದು ,ಇದು ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ ಪದೇ ಪದೇ ಬೆಳಗಾವಿ ಮಹಾರಾಷ್ಟ್ರಕ್ಕೆ ಸಂಬಂಧಪಟ್ಟ ಕೆಲವು ಕಿಡಿಗೇಡಿಗಳು ಕರ್ನಾಟಕ ರಾಜ್ಯದ ವಿರುದ್ಧ ಅನೇಕ ಬಾರಿ ಅಪಮಾನ ಮಾಡುತ್ತಿರುವ ದುಷ್ಠ ಶಕ್ತಿಗಳನ್ನು ಕೂಡಲೇ ಬಂಧಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ ಉಪಾಧ್ಯಕ್ಷ ಮಹೇಶ ಮುಳಗುಂದ, ಹನುಮಂತು ಕೊನಿಸಾಗರ ,ಅಶೋಕ ಬಸಾಪೂರ ,ಅಬ್ಬು ಬೆಟಗೇರಿ ,ಮಲ್ಲಿಕ ಮುಳಗುಂದ, ಹಾಲಪ್ಪ ನಾಗಣ್ಣವರ, ಸಮೀರ ಸಿದ್ದಿ ಸಚಿನ ನೀಲಪ್ಪಗೌಢರ, ಹೊನ್ನಪ್ಪ ಭಜಕ್ಕನವರ, ಮುತ್ತುರಾಜ ಪೂಜಾರ ಮತ್ತು ಅಜಯ ಬಳಗಾನೂರ ಸೇರಿದಂತೆ ಅನೇಕರು ಇದ್ದರು.

Exit mobile version