ನಗರಸಭೆ ಚುನಾವಣೆ :ವಾರ್ಡ ನಂ22ರ ಕಾಂಗ್ರೇಸ್ ಅಭ್ಯರ್ಥಿ ಪರ ಮಾಜಿ ಶಾಸಕ ಡಿ ಆರ್ ಪಾಟೀಲ ಗಂಗಿಮಡಿಯಲ್ಲಿ ಪ್ರಚಾರ


ಗದಗ:ನಗರಸಭೆ ಚುನಾವಣೆ ಡಿ. 20-12-2021 ರಂದು ವಾರ್ಡ್ ನಂ 22 ರ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ರವಿಕುಮಾರ ಕೂಟ್ರಪ್ಪ ಕಮತರ ಪರ ಗಂಗಿಮಡಿಯಲ್ಲಿ ಮಾಜಿ ಶಾಸಕರಾದ ಡಿಆರ್ ಪಾಟೀಲ ಅಬ್ಬರದ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸಲು ಮನವಿ ಮಾಡಿದರು.
ಅವರೊಂದಿಗೆ ಮಾಜಿ ಶಾಸಕರಾದ ಶ್ರೀ ಶೈಲಪ್ಪ ಬಿದರೂರ ,ಗುರಣ್ಣ ಬಳಗಾನೂರ, ಕೊಟ್ರಪ್ಪ ಕಮತರ, ನೀಲಮ್ಮ ಬೊಳನವರ, ಪಾರುಖ ಮುಲ್ಲಾ, ವಿರುಪಾಕ್ಷಪ್ಪ ಅಕ್ಕಿ , ವೈಹಿದಾ ಖಲೀಪ ಹಾಜಿ ಹುಸೇನ, ಪಲ್ಲೇದ ರಿಯಾಜ ಪಾಮಾಡಿ ,ಇಸುಬ ನಮಾಜಿ ಅನ್ವರ ಶಿರಹಟ್ಟಿ ಗಂಗಿಮಡಿಯ ಗುರುಹಿರಿಯರು ಮುಂತಾದವರು ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು.

ಮಾಜಿ ಶಾಸಕರಾದ ಡಿ ಆರ್ ಪಾಟೀಲ್ ಮತ್ತು ಶ್ರೀ ಶೈಲಪ್ಪ ಬಿದರೂರ ಅವರು ಗಂಗಿಮಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆ

Exit mobile version